
ಉಡುಪಿ: ಕೋಮು ಸಂಘರ್ಷ ತಡೆದು ಶಾಂತಿ, ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗೆ ಸೀಮಿತವಾದ ವಿಶೇಷ ಕಾರ್ಯ ಪಡೆಯಿಂದ ಯಾವ ಜಿಲ್ಲೆಯ ಘನತೆಗೂ ಧಕ್ಕೆಯಾಗದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಕ್ಸಲರ ನಿಯಂತ್ರಣಕ್ಕಿದ್ದ ಎ.ಎನ್.ಎಫ್ ಸಹಿತ ಪೊಲೀಸರು ಶಾಂತಿ, ಕಾನೂನು ಸುವ್ಯವಸ್ಥೆ ಜನರ ರಕ್ಷಣೆಗಿದೆ. ಹೀಗಾಗಿ ಎಸ್.ಎ.ಎಫ್.ನಿಂದ ಉಡುಪಿ ಜಿಲ್ಲೆ ಮತ್ತು ಕರಾವಳಿ ಭಾಗದ ಜನರ ಘನತೆಗೆ ಧಕ್ಕೆಯಾಗದು ಎಂದು ಹೇಳಿದರು.

j3tvkannada
ಎಸ್.ಎ.ಎಫ್ ಅಗತ್ಯ ಬಿದ್ದರೆ ಅನ್ಯ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದ, ಡಾ. ಜಿ. ಪರಮೇಶ್ವರ್ ಕರಾವಳಿಯಲ್ಲಿ ಅದರಲ್ಲೂ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ನಡೆದ ಘಟನಾವಳಿಗಳ ಆಧಾರದಲ್ಲಿ ಎಸ್.ಎ.ಎಫ್ ರಚನೆಯ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲೆಯನ್ನು ಇನ್ನೊಂದು ರೀತಿಯಲ್ಲಿ ಬಿಂಬಿಸಲ್ಲ. ಎಸ್.ಎ.ಎಫ್ ಬಳಕೆ ಆಗದಿರಲಿ ಎನ್ನುವ ಆಶಯವನ್ನು ಉದ್ಘಾಟನೆ ಸಂದರ್ಭ ವ್ಯಕ್ತಪಡಿಸಿದ್ದರ ಹಿಂದೆ ಜಿಲ್ಲೆಯಲ್ಲಿ ಕೋಮು ಸಂಘರ್ಷದ ವಾತಾವರಣವಿಲ್ಲದೆ ಕಾನೂನು, ಶಾಂತಿ ಸುವ್ಯವಸ್ಥೆ ಚೆನ್ನಾಗಿರಲೆನ್ನುವ ಅಭಿಲಾಶೆಯಿದೆ. ಎಸ್. ಒ.ಪಿ ಪ್ರಕಾರ ಎಸ್.ಎ.ಎಫ್ ಕಾರ್ಯನಿರ್ವಹಿಸಲಿದೆ ಎಂದು ಡಾ. ಜಿ ಪರಮೇಶ್ವರ್ ನುಡಿದರು.

j3tvkannada
ಜನಾಭಿಪ್ರಾಯಕ್ಕೆ ಅನುಗುಣವಾಗಿ ಸಿ.ಎಂ ಸಿದ್ದರಾಮಯ್ಯ ಹಾಗೂ ಸಂಪುಟ ತೀರ್ಮಾನದಂತೆ ಜಾತಿ ಗಣತಿ ಮರು ಸಮೀಕ್ಷೆ ಮಾಡಲಾಗುತ್ತಿದೆ. ಸಮುದಾಯ, ಸಂಘ ಸಂಸ್ಥೆಗಳು ತಮ್ಮ ಜನರ ಸಂಖ್ಯೆ ನಿಖರವಾಗಿಲ್ಲ, ೧೦ವರ್ಷ ಹಳೆಯ ಅಂಕಿ ಅಂಶ, ೧.೫ ಕೋಟಿ ಜನರ ಸೇರ್ಪಡೆಯನ್ನು ಗಣನೆಗೆ ತೆಗೆದುಕೊಳ್ಳಲು ಒತ್ತಾಯಿಸಿವೆ. ಹೀಗಾಗಿ ಜನರ ಭಾವನೆ ಅರ್ಥೈಸಿ ರಾಜ್ಯ ಸರಕಾರ ಹೈಕಮಾಂಡ್ ಸೂಚನೆಯಂತೆ ಜಾತಿ ಗಣತಿ ಮರು ಸಮೀಕ್ಷೆಯ ತೀರ್ಮಾನ ಕೈಗೊಂಡಿದೆ. ಕಾಂತರಾಜು, ಕೆ. ಜಯಪ್ರಕಾಶ್ ಹೆಗ್ಡೆ ಅವಧಿಯಲ್ಲಿ ನಡೆದ ಸಮೀಕ್ಷೆಯ ವೈಜ್ಞಾನಿಕ ತಳಪಾಯದ ಆಧಾರದಲ್ಲಿ ಜಾತಿ ಗಣತಿ ಮರು ಸಮೀಕ್ಷೆ ಮುಂದುವರಿಯಲಿದೆ.
ಕೇಂದ್ರ ಕೇವಲ ಜನಗಣತಿ, ಜಾತಿ ಗಣತಿ ಮಾಡಲಿದ್ದರೆ ರಾಜ್ಯ ಸರಕಾರ ಇನ್ನೂ ಎರಡು ಹೆಜ್ಜೆ ಮುಂದಿಟ್ಟು ನಾನಾ ಜಾತಿ, ಜನಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಂಶಗಳ ಸ್ಥಿತಿಗತಿಯನ್ನು ಸಮೀಕ್ಷೆ ಅಧ್ಯಯನ ಒಳಗೊಳ್ಳಲಿದೆ. ಅಂಕಿ ಅಂಶಗಳ ದಾಖಲೀಕರಣದಿಂದ ಸ್ಪಷ್ಟತೆ ಸಿಗಲಿದೆ ಎಂದರು. ದೇವಳಗಳ ಭೇಟಿ ಸಂಪ್ರದಾಯ. ಕೊಲ್ಲೂರು ಮೂಕಾಂಬಿಕಾ ದೇವಿಗೆ ನಮಸ್ಕಾರ ಹಾಕಿದ್ದೇನೆ ಪೂಜೆ ಸಲ್ಲಿಸಿ ಬಂದಿದ್ದೇನೆ. ಯಾಕಾಗಿ ಎಂದು ನೀವು ಕೇಳಬಾರದು, ನಾ ಹೇಳಬಾರದು ಎಂದು ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.