
ಬೆಂಗಳೂರು ಗ್ರಾಮಾಂತರ: ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಜನರನ್ನ ಬಲಿ ಪಡೆದಿದ್ದ ಚಿನ್ನಸ್ವಾಮಿ ಸ್ಟೇಡಿಯಂಗೆ ಕಂಟಕ ತಟ್ಟಿದಂತಾಗಿದೆ. ಇತ್ತ ಕಾಲ್ತುಳಿತ ದುರಂತದ ಪ್ರಕರಣ ಎದುರಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಗೆ (KSCA) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಜಾಹೀರಾತು ಪ್ರದರ್ಶನ ಮಾಡಿ ಪೋಸ್ ಕೊಡುತ್ತಿದ್ದ ಕ್ರಿಕೆಟ್ ಅಕಾಡೆಮಿಗೆ ಇದೀಗ ಬಿ.ಬಿ.ಎಂ.ಪಿ ಶಾಕ್ ಕೊಡುವುದಕ್ಕೆ ಸಜ್ಜಾಗಿದೆ.

j3tvkannada
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಿ.ಐ.ಡಿ ತನಿಖೆ ಎದುರಿಸುತ್ತಿರುವ ಕೆ.ಎಸ್.ಸಿ.ಎಗೆ ಇದೀಗ ಬಿ.ಬಿ.ಎಂ.ಪಿ ಕೂಡ ಶಾಕ್ ನೀಡುವುದಕ್ಕೆ ಸಜ್ಜಾಗಿದೆ. ಹಲವು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿರುವ ಕೆ.ಎಸ್.ಸಿ.ಎ ಸರಿಸುಮಾರು 10 ಕೋಟಿ ರೂ. ಜಾಹೀರಾತು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಇದೀಗ ಬಾಕಿ ತೆರಿಗೆ ವಸೂಲಿಗೆ ಬಿ.ಬಿ.ಎಂ.ಪಿ ಪ್ಲಾನ್ ಮಾಡೋಕೆ ಮುಂದಾಗಿದೆ.

j3tvkannada
ಇತ್ತ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೆ.ಎಸ್.ಸಿ.ಎ ಗೆ ಈಗಾಗಲೇ ನೋಟಿಸ್ ನೀಡಿದ್ದ ಪಾಲಿಕೆ ಇದೀಗ ಮತ್ತೆ ನೋಟಿಸ್ ಕೊಟ್ಟು ತೆರಿಗೆ ವಸೂಲಿ ಮಾಡುವುದಕ್ಕೆ ತಯಾರಿ ನಡೆಸಿದೆ. ಇನ್ನು ಜಾಹೀರಾತು ನಿಯಮಗಳ ಅನ್ವಯ ರೂಲ್ಸ್ ಬ್ರೇಕ್ ಮಾಡಿದ್ದ ಕೆ.ಎಸ್.ಸಿ.ಎ ಗೆ ಈ ಹಿಂದೆ ಕೂಡ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ತೆರಿಗೆ ಪಾವತಿಯಾಗಿರಲಿಲ್ಲ. ಇದೀಗ ಕಬ್ಬಿಣ ಕಾದಾಗ ತಟ್ಟಬೇಕು ಅನ್ನೋ ಪ್ಲಾನ್ ಅನುಸರಿಸೋಕೆ ಹೊರಟಿರುವ ಪಾಲಿಕೆ ಮತ್ತೆ ನೋಟಿಸ್ ಕೊಡುವುದಕ್ಕೆ ಪ್ಲಾನ್ ಮಾಡುತ್ತಿದೆ.
ಇನ್ನು ತೆರಿಗೆ ಬಾಕಿ ಜೊತೆಗೆ ದಂಡಾಸ್ತ್ರ ಪ್ರಯೋಗಕ್ಕೂ ಪಾಲಿಕೆ ಸಜ್ಜಾಗಿದ್ದು, ಈ ಬಾರೀ ಬಾಕಿ ಪಾವತಿಸದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳೋದಾಗಿ ಕೂಡ ಎಚ್ಚರಿಕೆ ನೀಡಿದೆ. ಸದ್ಯ ಯಾವುದೇ ಪೂರ್ವ ತಯಾರಿ ಇಲ್ಲದೇ ಆರ್.ಸಿ.ಬಿ ಕಪ್ ಸಂಭ್ರಮಾಚರಣೆ ಆಚರಿಸಿ ಸಂಕಷ್ಟಕ್ಕೆ ಸಿಲುಕಿರುವ ಕೆ.ಎಸ್.ಸಿ.ಎ ಗೆ ಇದೀಗ ಏಟಿನ ಮೇಲೆ ಮತ್ತೊಂದು ಏಟು ಅನ್ನೋ ಹಾಗೇ ಪಾಲಿಕೆ ಕೂಡ ಸವಾರಿ ಮಾಡುವುದಕ್ಕೆ ತಯಾರಾಗಿ ನಿಂತಿದೆ. ಇತ್ತ ಕಾಲ್ತುಳಿತ ದುರಂತದ ಬಳಿಕ ವಿಚಾರಣೆ ಎದುರಿಸ್ತಿರೋ ಕೆ.ಎಸ್.ಸಿ.ಎ ಇದೀಗ ಪಾಲಿಕೆಗೆ ಬಾಕಿ ಹಣ ಪಾವತಿ ಮಾಡುತ್ತ ಅನ್ನೋದನ್ನ ಕಾದುನೋಡಬೇಕಿದೆ.