

j3tvkannada
ಬಾಗಲಕೋಟೆ: ಭಾರತ ಮಾತೆಯನ್ನು ರಕ್ಷಣೆ ಮಾಡುವ ಎಲ್ಲ ಮನೋದೇಹಗಳು ಭಾರತ ಪುತ್ರರಾಗಿದ್ದಾರೆ. ಅದರಲ್ಲೂ ನಮ್ಮ ತ್ರಿಸೇನಾ ಬಲದ ಯೋಧರು ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿ ನಮ್ಮನ್ನೆಲ್ಲ ರಕ್ಷಿಸುತ್ತಿರುವ ಯೋಧರು, ನಮ್ಮ ಸ್ತ್ರೀ-ಬಳಗದ ಸಿಂಧೂರ ಅಳಿಸಿದ ಪಾತಕಿಯರನ್ನು ಸದೆಬಡಿದು, ಸಿಂಧೂರದ ಮಹತ್ವ ತಿಳಿಸಿ ವಿಜಯ ಪತಾಕೆ ಹಾರಿಸಿದ ಯೋಧರ ಮಡದಿಯರು ತಮ್ಮ ಸಿಂಧೂರ ಪಣಕ್ಕಿಟ್ಟು ಎಲ್ಲ ಸ್ತ್ರೀ ಬಳಗದ ಹಾಗೂ ಭಾರತಮಾತೆಯ ಸಿಂಧೂರ ರಕ್ಷಣೆಗೆ ನಿಂತ ಯೋಧರ ಮಡದಿಯರಿಗೆ ಯೋಧ ಸಿಂಧೂರ ಕಾರ್ಯಕ್ರಮವನ್ನು 08.06.2025ನೇ ರವಿವಾರ ಸಮಯ ಸಂಜೆ 4-00 ಘಂಟೆಗೆ ಶ್ರೀ ಕಸ್ತೂರಿಮಠ, ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪರಪೂಜ್ಯ ಶ್ರೀ ಕರಬಸ್ವೇಶ್ವರ ಶಿವಯೋಗಿ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಯೋಧರ ಧರ್ಮಪತ್ನಿಯರಿಗೆ ಸಿಂಧೂರಾರ್ಪಣೆ ಮಾಡಿ ತಾಯಂದಿರ ಸಿಂಧೂರ ಶಾಶ್ವತವಾಗಿದ್ದು ವಿಜಯಲಕ್ಷ್ಮೀ ಸದಾ ನೆಲೆಸಲಿ ಎಂದು ಪ್ರಾರ್ಥಿಸುವ ಕಾರ್ಯಕ್ರಮಕ್ಕೆ ತಮಗೆಲ್ಲ ಗೌರವಪೂರ್ವಕ ಸುಸ್ವಾಗತ ಕೋರಲಾಗಿದೆ.