
ಹಾವೇರಿ: ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ, ಸಾರ್ವಜನಿಕರು ಸಹಕಾರ ನೀಡದಿದ್ದರೆ ಯಾವುದೇ ಇಲಾಖೆ ಸಹ ಸಮರ್ಪಕ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಇಲ್ಲಿನ ಗುರುಭವನದಲ್ಲಿ ಪುರಸಭೆ ಆಯೋಜಿಸಿದ್ದ ಪೌರಾಡಳಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುರಸಭೆ ಪ್ರಭಾರ ಅಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಸರಕಾರದ ಯೋಜನೆಗಳ ಸಮರ್ಪಕ ಬಳಕೆಯಲ್ಲಿ ಪುರಸಭೆ ಹಾಗೂ ಸಾರ್ವಜನಿಕರ ಸಮಪಾಲು ಇರಬೇಕು. ನಮ್ಮ ಸರಕಾರ ಜನರಿಗೋಸ್ಕರ ಇರುವ ಸರಕಾರ. ಜನರೂ ಕೂಡ ಸರಕಾರದ ಕೆಲಸಗಳಿಗೆ ಶಕ್ತಿ ತುಂಬಿ ಇಡೀ ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳುವಲ್ಲಿ ಸಹಕರಿಸಬೇಕು ಎಂದರು.

j3tvkannada
ಮುಖ್ಯಾಧಿಕಾರಿ ವೈ.ಕೆ.ಜಗದೀಶ ಮಾತನಾಡಿ, ಶ್ರಮಿಕರ ಸೇವೆಯನ್ನು ಸ್ಮರಿಸುವ ದಿನ ಇದಾಗಿದೆ. ಸರಕಾರ ಪೌರಾಡಳಿತ ದಿನಾಚರಣೆಗೆ ಅವಕಾಶ ಮಾಡಿ ಕೊಟ್ಟಿರುವುದು ನಿಜಕ್ಕೂ ಸಂತಸದ ಸಂಗತಿ. ಈ ಮೂಲಕ ಪುರಸಭೆಗಳ ಸಮಸ್ಯೆಗಳನ್ನು ಸಾರ್ವಜನಿಕರಕೊಂದಿಗೆ ಹಂಚಿಕೊಳ್ಳುವುದಕ್ಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಈ ದಿನಾಚರಣೆ ಸಹಕಾರಿ ಎಂದರು. ಪುರಸಭೆ ಮಾಜಿ ಅಧ್ಯಕ್ಷರಾದ ಮಮತಾ ಆರೆಗೊಪ್ಪ, ಖುರ್ಷಿದ್ ಹುಲ್ಲತ್ತಿ, ಪರಶುರಾಮ, ಖಂಡೂನವರ, ಅಬ್ದುಲ್ಘನಿ ಪಾಳಾ, ವಿನಾಯಕ ಬಂಕನಾಳ, ನಿಯಾಜ ಸರ್ವಿಕೇರಿ, ಸುರೇಶ ನಾಗಣ್ಣನವರ, ಮಾಲತೇಶ ಕಾಳೆ, ಮೇಕಾಜಿ ಕಲಾಲ, ಕಾಂಗ್ರೆಸ್ ನಗರ ಅಧ್ಯಕ್ಷ ಮತೀನ ಶಿರಬಡಗಿ ವೇದಿಕೆಯಲ್ಲಿದ್ದರು. ಮಧುಮತಿ ಡೂಗೂರಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.