
ತುಮಕೂರು: ಕರ್ನಾಟಕದಲ್ಲಿ ಉಪ ನೋಂದಾಣಾಧಿಕಾರಿಗಳ ಕಚೇರಿಗಳು ರಜಾ ದಿನಗಳಲ್ಲಿಯೂ ತೆರೆಯುವಂತೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿರುವ 11 ಉಪನೋಂದಣಿ ಕಚೇರಿಗಳು ಇನ್ನು ಮುಂದೆ ನಿಗದಿಪಡಿಸಿದ ರಜಾದಿನಗಳಾದ 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರಗಳಂದು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾ ನೋಂದಣಾಧಿಕಾರಿ ಬಿ. ಶ್ರೀಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

j3tvkannada
ಪ್ರತಿಯೊಂದು ಜಿಲ್ಲೆಯ ನೋಂದಣಿ ಕಚೇರಿಯ ಅಧೀನದಲ್ಲಿರುವ ಉಪ ನೋಂದಣಿ ಕಚೇರಿಗಳು, ಭಾನುವಾರದಂದು ಸಹ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಮಂಗಳವಾರದಂದು ವಾರದ ರಜೆ ನೀಡುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಆದೇಶವು ಜೂ. 1ರಿಂದ ಈ ವರ್ಷಾಂತ್ಯವರೆಗೆ ಅಂದರೆ, ಮೇ 25ರವರೆಗೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆ ಹಿನ್ನೆಲೆಯಲ್ಲಿ ರಜಾ ದಿನದಂದು ಕರ್ತವ್ಯ ನಿರ್ವಹಿಸುವ ಉಪ ನೋಂದಣಿ ಕಚೇರಿಗೆ ಕರ್ತವ್ಯ ನಿರ್ವಹಿಸಿದ ನಂತರ ಬರುವ ಮಂಗಳವಾರದಂದು ರಜಾ ದಿನವೆಂದು ಘೋಷಿಸಲಾಗುವುದು ಎಂದು ತುಮಕೂರು ಜಿಲ್ಲೆಯ ಜಿಲ್ಲಾ ನೋಂದಣಾಧಿಕಾರಿ ಬಿ. ಶ್ರೀಕಾಂತ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರಜಾ ದಿನಗಳಂದು ಕಾರ್ಯನಿರ್ವಹಿಸುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಜೂನ್.1ರಿಂದ ಡಿ.28 ರವರೆಗೆ ಕರ್ತವ್ಯ ದಿನವನ್ನು ಕಚೇರಿವಾರು ದಿನಾಂಕ ನಿಗದಿಪಡಿಸಲಾಗಿದೆ.

j3tvkannada
ಕುಣಿಗಲ್ ಉಪನೋಂದಣಿ ಕಚೇರಿಯು ಜೂನ್.1, ಜುಲೈ 26,ಸೆಪ್ಟೆಂಬರ್.14, ನವೆಂಬರ್.8; ಮಧುಗಿರಿ- ಜೂನ್.8, ಜುಲೈ.22, ಸೆಪ್ಟೆಂಬರ್.21 ಹಾಗೂ ನವೆಂಬರ್.9; ತುಮಕೂರು- ಜೂನ್.14, ಆಗಸ್ಟ್.3, ಸೆಪ್ಟೆಂಬರ್.27, ನ.16; ತಿಪಟೂರು-ಜೂನ್.15, ಆಗಸ್ಟ್.9, ಸೆ.28, ನವೆಂಬರ್.22; ಗುಬ್ಬಿ ಜೂನ್.22, ಆಗಸ್ಟ್.10, ಅಕ್ಟೋಬರ್.5, ನ.23; ಚಿಕ್ಕನಾಯಕನಹಳ್ಳಿ-ಜೂನ್.28, ಆಗಸ್ಟ್.17,ಅಕ್ಟೋಬರ್.11, ಡಿ.7; ತುರುವೇಕೆರೆ-ಜೂನ್.29, ಆಗಸ್ಟ್.23, ಅಕ್ಟೋಬರ್.12, ಡಿ.13; ಕೊರಟಗೆರೆ-ಜೂನ್.6, ಆಗಸ್ಟ್.24, ಅಕ್ಟೋಬರ್.19, ಡಿ.14; ಪಾವಗಡ-ಜೂನ್.12, ಆಗಸ್ಟ್.31, ಅಕ್ಟೋಬರ್.25, ಡಿಸೆಂಬರ್.21; ಶಿರಾ-ಜುಲೈ 13, ಸೆಪ್ಟೆಂಬರ್.7, ಅಕ್ಟೋಬರ್.26, ಡಿಸೆಂಬರ್.27; ಹುಲಿಯೂರು ದುರ್ಗ ಉಪನೋಂದಣಿ ಕಚೇರಿಯು ಜು.20, ಸೆಪ್ಟೆಂಬರ್.13,ನವೆಂಬರ್.2 ಹಾಗೂ ಡಿಸೆಂಬರ್.28ರಂದು ಕಾರ್ಯ ನಿರ್ವಹಿಸಲಿವೆ.
ಈಗಾಗಲೇ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಜಿಲ್ಲಾ ವ್ಯಾಪ್ತಿಯ ರಜಾ ದಿನದಲ್ಲಿಕಾರ್ಯನಿರ್ವಹಿಸುವ ಕಚೇರಿಯಲ್ಲಿ ಜಿಲ್ಲೆಯ ಯಾವುದೇ ಸ್ವತ್ತನ್ನು ನೋಂದಣಿ ಮಾಡಿಕೊಳ್ಳಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದಸ್ತಾವೇಜುಗಳನ್ನು ನೋಂದಾಯಿಸಿಕೊಳ್ಳುವಂತೆ ಬಿ. ಶ್ರೀಕಾಂತ್ ತಿಳಿಸಿದ್ದಾರೆ.

j3tvkannada
ಕರ್ನಾಟಕದಲ್ಲಿ ನಕಲಿ ನೋಂದಣಿ ಮಾಡಿದರೆ ಮೂರು ವರ್ಷ ಜೈಲು ಎಂಬ ಹೊಸ ಕಾನೂನನ್ನು ರಾಜ್ಯ ಸರ್ಕಾರ 2024ರ ಅಕ್ಟೋಬರ್ ನಲ್ಲಿ ಜಾರಿಗೊಳಿಸಿತು. ಈ ನಿಯಮವನ್ನು ವಿರೋಧಿಸಿ ಸಬ್ ರಿಜಿಸ್ಟ್ರಾರ್ಗಳು ನೋಂದಣಿ ಕಾರ್ಯವನ್ನು ಅಕ್ಟೋಬರ್ 24ರಂದು ಸ್ಥಗಿತಗೊಳಿಸಿದ್ದರು. ಹೀಗಾಗಿ ಆ ದಿನ ರಾಜ್ಯದ ಹಲವೆಡೆ ಆಸ್ತಿ ದಾಖಲೆ ನೋಂದಣಿ ಸ್ಥಗಿತವಾಗಿತ್ತು.
ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳುವವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಎನಿವೇರ್ ನೋಂದಣಿ ಯೋಜನೆಯನ್ನು 2024ರಂದು ಜಾರಿಗೆ ತಂದಿದೆ. 2024ರ ಸೆಪ್ಟೆಂಬರ್ನಿಂದ ಈ ಯೋಜನೆ ಜಾರಿಯಾಗಿದೆ. ಈ ಯೋಜನೆಯ ಮೂಲಕ ಜನರು ಬಯಸಿದೆಡೆ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಈ ಮೂಲಕ ವಿಳಂಬ ಮತ್ತು ಅಕ್ರಮಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.
ಸಬ್ರಿಜಿಸ್ಟ್ರಾರ್ ಕಚೇರಿಗಳ ಶುದ್ಧೀಕರಣಕ್ಕೆ ರಾಜ್ಯ ಸರ್ಕಾರ ಕಳೆದ ವರ್ಷವೇ ಕೈ ಹಾಕಿತ್ತು. ರಾಜಧಾನಿ ಬೆಂಗಳೂರು ಸುತ್ತಮುತ್ತ ಹಲವು ವರ್ಷಗಳಿಂದ ಠಿಕಾಣಿ ಹೂಡಿರುವ 51 ಉಪ ನೋಂದಣಾಧಿಕಾರಿ ಕಚೇರಿಗಳ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ, ಕೇಂದ್ರ ಕಚೇರಿಗಳ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಿತ್ತು. ಇವರನ್ನು ಗ್ರಾಮೀಣ ಭಾಗಗಳಿಗೆ ವರ್ಗಾಯಿಸಲಾಗಿತ್ತು.