
ಬಳ್ಳಾರಿ: ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಸಂಘಟನೆಯಿ0ದ ಬೇಡ ಜಂಗಮರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು ಹಾಗೂ ಈ ಮುಂಚೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದನ್ನು ಕೂಡಲೇ ರದ್ದುಗೊಳಿಸಿ ಅವರ ವಿರುಧ್ಧ ಮತ್ತು ಪ್ರಮಾಣ ಪತ್ರವನ್ನು ನೀಡಿದವರ ವಿರುಧ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

j3tvkannada
ಪಟ್ಟಣದ ಆಡಳಿತ ಸೌಧದ ಎದುರು ಮನವಿ ಸಲ್ಲಿಸಿ ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆಯ ಜಿಲ್ಲಾಧ್ಯಕ್ಷ ಬ್ಯಾಲಾಳು ಮಂಜುನಾಥ್ ಮಾತನಾಡಿ ರಾಜ್ಯದೆಲ್ಲೆಡೆ ಬೇಡ ಜಂಗಮರಿಲ್ಲ ರಾಜ್ಯ ಸರಕಾರ ಬೇಡ ಜಂಗಮರನ್ನು ತೆಗೆದು ಹಾಕಬೇಕು, ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯ ಮೂಲ ಸಮುದಾಯಗಳಿಗೆ ಅನ್ಯಾಯ ಆಗಬಾರು. ಕೂಡಲೇ ರಾಜ್ಯದಲ್ಲಿ ಬೇಡ ಜಂಗಮ ಅಲ್ಲದವರು ಜಾತಿ ಪ್ರಮಾಣ ಪತ್ರ ಪಡೆದು ಮೂಲ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಮಾಡುತ್ತಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಯಾವ ಜಿಲ್ಲೆಯಲ್ಲಿ ಎಷ್ಟು ವೀರಶೈವ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬುದರ ಮಾಹಿತಿ ಪಡೆದು ಅವರನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಟ್ಟು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮುಖಂಡ ಪರಶುರಾಮ್ ಮಾತನಾಡಿ ವೀರಶೈವ ಜಂಗಮ ಹಾಗೂ ಮಾಂಸ ಸೇವನೆ ಮಾಡುತ್ತಿದ್ದ ಬೇಡ ಜಂಗಮ ಬೇರೆ ಬೇರೆಯಾಗಿದ್ದಾರೆ ಆಂಧ್ರದಿಂದ ಬಂದಿರುವ ಬೇಡ ಜಂಗಮರು ಬೇಟೆಯಾಡುತ್ತಿದ್ದರು, ಅವರ ಆಹಾರ ಪದ್ಧತಿಯಲ್ಲಿ ಮಾಂಸ ಸೇವನೆಯು ಇತ್ತು, ಅಂತಹ ಸಮುದಾಯದ ಬೇಡ ಜಂಗಮರು ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಅವರೆಲ್ಲ ನಶಿಸಿ ಹೋಗಿದ್ದಾರೆ, ಹಾಗಾಗಿ ವೀರಶೈವ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿರುವುದು ಅಸ್ಪೃಶ್ಯರ ತಟ್ಟೆಯಲ್ಲಿನ ಅನ್ನ ಕಸಿದುಕೊಂದಂತಾಗಿದೆ, ಬೇಡಜಂಗಮ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು ಮೀಸಲಾತಿ ಸಿಗುತ್ತದೆ ಎಂಬ ಕಾರಣಕ್ಕೆ ವೀರಶೈವ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಪಡೆದು ಮೂಲ ಅಸ್ಪೃಶ್ಯ ಜಾತಿಯವರಿಗೆ ಅನ್ಯಾಯ ಮಾಡುತ್ತಿದ್ದಾರೆ., ಕೂಡಲೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸೂಕ್ತ ಕ್ರಮಕ್ಕೆ ಅಗ್ರಹಿಸಿದರು. ಮನವಿ ಸ್ವೀಕರಿಸಿ ತಹಶೀಲ್ದಾರ್ ಆರ್.ಕವಿತ ಮಾತನಾಡಿ ಸಂಘಟನೆಯಿಂದ ನೀಡಿದ ಮನವಿಯನ್ನು ಮೇಲಾಧಿಕಾರಿಗಳಿಗೆ ಶೀಘ್ರ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.,
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರು ನಾಗರಾಜ ಕಲ್ಲಹಳ್ಳಿ, ಆನಂದೇವನಹಳ್ಳಿ ಪ್ರಭಾಕರ, ಮೇಘರಾಜು ಒಂಟಿ, ಕೋಗಳಿ ಮಲ್ಲೇಶ್, ದಶಮಪುರ ಮರಿಯಪ್ಪ, ರಮೇಶ್ ಪೂಜಾರ್, ಲಿಂಗರಾಜ, ಮಾಲ್ವಿ ಭೀಮಪ್ಪ, ರಮೇಶ್ ಪೂಜಾರಿ, ಕಿತ್ನೂರು ದುರ್ಗಪ್ಪ, ಫಕೀರಪ್ಪ, ಬೆನಕನ ಪ್ರತಾಪ್, ಮಂಜುನಾಥ್ ಚೆಲುಗೋಡು ಮೈಲಪ್ಪ, ಮಧ್ಯನ್ ಸ್ವಾಮಿ, ರಮೇಶ್ ಮಾಧುರು, ಕೊಗಳಿ ಮೈಲಾಪ್ಪ ಸೇರಿದಂತೆ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಇನ್ನು ಮುಂತಾದವರು ಇದ್ದರು.