
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸರ್ವಶ್ರೇಷ್ಠ ಪ್ರದರ್ಶನ ಪಣಕ್ಕಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016 ರ ನಂತರ ಹಾಗೂ ಒಟ್ಟಾರೆ 4ನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಫೈನಲ್ ಪ್ರವೇಶಿಸಿ ಸಾಧನೆ ಮಾಡಿತು. ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ ಬೆಂಗಳೂರು ತಂಡ 2ನೇ ಕ್ವಾಲಿಫೈಯರ್ ವಿಜೇತ ತಂಡವನ್ನು ಎದುರಿಸಲಿದೆ.
ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ ಬೆಂಗಳೂರು ತಂಡ 2ನೇ ಕ್ವಾಲಿಫೈಯರ್ ವಿಜೇತ ತಂಡವನ್ನು ಎದುರಿಸಲಿದೆ. ಆರ್ಸಿಬಿ ಗೆದ್ದ ನಂತರ, ತಂಡದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಸಾಮಾಜಿಕ ಮಾಧ್ಯಮದಲ್ಲಿ ಭವಿಷ್ಯ ನುಡಿದಿದ್ದಾರೆ.

ಆರ್ಸಿಬಿ ಗೆದ್ದ ನಂತರ, ತಂಡದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಭವಿಷ್ಯ ನುಡಿದಿದ್ದಾರೆ. ಅವರು ಹೀಗೆ ಬರೆದಿದ್ದಾರೆ, ಇದನ್ನು ನಂಬಲು ಸಾಧ್ಯವೇ ? ʻಆರ್ಸಿಬಿ ಐಪಿಎಲ್ ಗೆದ್ದಿದೆʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಈ ಬಾರಿ ಆರ್ಸಿಬಿ ಐಪಿಎಲ್ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಐಪಿಎಲ್ 18 ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಆರ್ಸಿಬಿ ನೇರವಾಗಿ ಪ್ರಶಸ್ತಿ ಸುತ್ತು ತಲುಪಿತು. ಕಿಂಗ್ಸ್ ಒಡ್ಡಿದ 102 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ರಜತ್ ಪಾಟೀದಾರ್ ಸಾರಥ್ಯದ ಆರ್ಸಿಬಿ, ಕೇವಲ 60 ಎಸೆತಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು ನಾಲ್ಕು ಬಾರಿ ಫೈನಲ್ ಪ್ರವೇಶಿಸಿದೆ. 2025ರ ಋುತುವಿಗೂ ಮುನ್ನ 2009, 2011 ಮತ್ತು 2016 ರಲ್ಲಿ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
9 ವರ್ಷಗಳ ನಂತರ ಆರ್ಸಿಬಿ ಫೈನಲ್ಗೆ :
ಮುಷೀರ್ ಖಾನ್ ಎಸೆದ 10 ನೇ ಓವರ್ನ ಕೊನೆಯ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ನಾಯಕ ರಜತ್ ಪಾಟೀದಾರ್, ಆರ್ಸಿಬಿ ಪಾಳಯ ಮತ್ತು ಅಭಿಮಾನಿಗಳ ಹರ್ಷೊದ್ಗಾರವನ್ನು ಇಮ್ಮಡಿಗೊಳಿಸಿದರು. ಆರಂಭದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಅವರನ್ನು ಕಳೆದುಕೊಂಡ ಹೊರತಾಗಿಯೂ ಫಿಲಿಪ್ ಸಾಲ್ಟ್ (56) ಅವರ ಸಿಡಿಲಬ್ಬರದ ಅರ್ಧ ಶತಕ ಹಾಗೂ ಮಯಂಕ್ ಅಗರ್ವಾಲ್ (19) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ಗೆದ್ದು ಬೀಗಿತು. ಬ್ಯಾಟಿಂಗ್ನಲ್ಲಿ ವಿಫಲಗೊಂಡ ಕಿಂಗ್ಸ್, ಬೌಲಿಂಗ್ನಲ್ಲೂ ನಿರಾಶಾದಾಯಕ ಪ್ರದರ್ಶನ ತೋರಿತು.

ಇದಕ್ಕೂ ಮುನ್ನ ಹೇಜಲ್ವುಡ್, ಸುಯಾಶ್ ಮತ್ತು ದಯಾಳ್ ಅವರ ಸಾಹಸದಿಂದ ಬೆಂಗಳೂರು ತಂಡ, ಕಿಂಗ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿತು
ಆರ್ಸಿಬಿ ಬೌಲರ್ಗಳಿಂದ ಮಾರಕ ದಾಳಿ 18 ವರ್ಷಗಳ ಪ್ರಶಸ್ತಿ ಬರ ನೀಗಿಸುವ ಹಾದಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹತ್ವದ ಪಂದ್ಯದಲ್ಲಿ ಬೌಲರ್ಗಳು ಕೈಹಿಡಿದರು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುವ ಮೂಲಕ 2014ರ ಪ್ಲೇಆಫ್ ಪ್ರವೇಶಿಸಿರುವ ಪಂಜಾಬ್, ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳಿಗೆ ಮಂಕಾದರು. ಇನಿಂಗ್ಸ್ನ 2 ನೇ ಓವರ್ನಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಯಶ್ ದಯಾಳ್, ಕಿಂಗ್ಸ್ನ ಪೆವಿಲಿಯನ್ ಪರೇಡ್ಗೆ ನಾಂದಿ ಹಾಡಿದರು. ಬೆರಳು ಗಾಯದ ಸಮಸ್ಯೆಯಿಂದಾಗಿ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದ ಆಸೀಸ್ ವೇಗಿ ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಹಾಗೂ ದಯಾಳ್ ಪಂಜಾಬ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನು ನಿರುತ್ತಗೊಳಿಸಿದರು.