
ಕಲಬುರಗಿ: ಕಲಬುರಗಿಯ ನಂದೂರು ಇಂಡಸ್ಟ್ರಿಯಲ್ ಏರಿಯಾದಲ್ಲಿನ ದಿನೇಶ್ ದಾಲ್ ಇಂಡಸ್ಟ್ರೀಸ್ ಮಾಲೀಕ ಗೋವಿಂದ ವಾಗ್ಮೋರೆ ಎಂಬುವವರು ಎ.ಪಿ.ಎಂ.ಸಿಯ ಸುಮಾರು 40ಕ್ಕೂ ಹೆಚ್ಚು ವರ್ತಕರಿಗೆ 15 ಕೋಟಿ ರೂಪಾಯಿ ವಂಚಿಸಿದ್ದಾನೆ. ಕಳೆದ ಹಲವಾರು ದಿನಗಳಿಂದ ಪೋನ್ ಮಾಡಿದರೂ ಸ್ವಿಚ್ಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ.
ಸೋಮವಾರ ರಾತ್ರಿ ಏಕಾಏಕಿ ದಾಲ್ ಮಿಲ್ನಲ್ಲಿದ್ದ ನೂರಾರು ಮೂಟೆ ತೊಗರಿ ಬೇಳೆಯನ್ನು ಯಾರಿಗೂ ಗೊತ್ತಾಗದಂತೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿದ ಎ.ಪಿ.ಎಂ.ಸಿ ವರ್ತಕರು ಮಿಲ್ಗೆ ತೆರಳಿ ಲಾರಿಗಳನ್ನು ತಡೆದಿದ್ದಾರೆ. ನಮ್ಮ ಹಣ ವಾಪಸ್ ಕೊಡುವವರೆಗೂ ಕೋಟ್ಯಾಂತರ ರೂಪಾಯಿ ಮೌಲ್ಯದ ತೊಗರಿ ಬೇಳೆಯನ್ನು ಸಾಗಿಸಲು ಬಿಡಲ್ಲ ಎಂದು ಪಟ್ಟು ಹಿಡಿದರು.

j3tvkannada
ತೊಗರಿ ಬೇಳೆ ತೆಗೆದುಕೊಂಡು ಹೋಗಲು ಬಂದವರು, ನಾವು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ದಾಲ್ ಮಿಲ್ನವರು ಎಂದಿದ್ದಾರೆ. ಗೋವಿಂದ ವಾಗ್ಮೋರೆ ತಮಗೂ ಕೂಡ ಮೋಸ ಮಾಡಿದ್ದಾನೆ. ಹೀಗಾಗಿ, ಆತನ ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ನನ್ನ ದಾಲ್ ಮಿಲ್ನಲ್ಲಿ ನೂರಾರು ಕ್ವಿಂಟಾಲ್ ತೊಗರಿ ಬೇಳೆಯಿದೆ ಎಂದು ಗೋವಿಂದ ಹೇಳಿದ್ದನು. ಹೀಗಾಗಿ, ತೆಗೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದ್ದಾರೆ. ಆಗ ವರ್ತಕರು, ಗೋವಿಂದ ನಮಗೆ 15 ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಬೇಕು.
ಅಷ್ಟೊಂದು ದೊಡ್ಡ ಮಟ್ಟದಲ್ಲಿ ನಾವು ರೈತರಿಂದ ತೊಗರಿಯನ್ನು ಖರೀದಿ ಮಾಡಿ ಆತನಿಗೆ ಕೊಟ್ಟಿದ್ದೇವೆ. ನೀವು ರಾತ್ರೋ ರಾತ್ರಿ ಇಲ್ಲಿರುವ ತೊಗರಿ ಬೇಳೆಯನ್ನು ತೆಗೆದುಕೊಂಡು ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಾಲ ಮಾಡಿ ವ್ಯವಹಾರ ಮಾಡುತ್ತಿದ್ದೇವೆ ಈಗ ಎಲ್ಲಾ ತೊಗರಿ ಬೇಳೆ ತೆಗದುಕೊಂಡು ಹೋದರೆ ಹೇಗೆ? ನಮ್ಮ ಹಣ ವಾಪಸ್ ಬರುವವರೆಗೂ ಗೋವಿಂದ ವಾಗ್ಮೋರೆಗೆ ಸೇರಿದ ಯಾವುದೇ ಮಾಲ್ ಬೇರೆಯವರು ತೆಗೆದುಕೊಂಡು ಹೋಗಲು ಬೀಡುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ವಂಚಕ ಗೋವಿಂದನ ವಿರುದ್ಧ ವರ್ತಕರೆಲ್ಲರೂ ಸೇರಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.