
ರಾಮನಗರ: ಬಮೂಲ್ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಅಧಿಕಾರ ದುರುಪಯೋಗ ಆಗಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ಚುನಾವಣೆ ಹಿಂದಿನ ದಿನವೇ ಚನ್ನಪಟ್ಟಣ ತಾಲೂಕಿನಲ್ಲಿ ಏಕಾಏಕಿ 17 ಮತದಾರರನ್ನು ಅನರ್ಹ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

j3tvkannada
ಚನ್ನಪಟ್ಟಣ ಬಮೂಲ್ ಕ್ಷೇತ್ರದ 17 ಮತದಾರರನ್ನು ಸಹಕಾರ ಇಲಾಖೆ ಸಹಾಯಕ ನಿಬಂಧಕ ವೆಂಕಟೇಶ್, ಏಕಾಏಕಿ ಅನರ್ಹ ಮಾಡಿದ್ದಾರೆ. ಜೆ.ಡಿ.ಎಸ್ ಬೆಂಬಲಿತ ಮತಗಳನ್ನೇ ಟಾರ್ಗೆಟ್ ಮಾಡಿ ಅನರ್ಹ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಹಕಾರ ಇಲಾಖೆ ಸಹಾಯಕ ನಿಬಂಧಕ ವಿರುದ್ಧ ಜೆ.ಡಿ.ಎಸ್ ಬೆಂಬಲಿತ ಮತದಾರರು ಆಕ್ರೋಶ ಹೊರ ಹಾಕಿದ್ದಾರೆ. ರಾಮನಗರದ ಎ.ಆರ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿ ವೆಂಕಟೇಶ್ಗೆ ತರಾಟೆ ತಗೆದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಹಕಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸೂಚನೆ ಮೇರೆಗೆ ಜೆಡಿಎಸ್ ಬೆಂಬಲಿತ ಮತಗಳ ಅನರ್ಹ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಅನುಕೂಲ ಮಾಡಿಕೊಡಲಾಗಿದೆ ಎಂದು ಚನ್ನಪಟ್ಟಣದ 17 ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಆಕ್ರೋಶ ಹೊರ ಹಾಕಿದ್ದಾರೆ.
ದೂರಿನ ಬಗ್ಗೆ ಅರ್ಜಿ ಬಂದ ಹಿನ್ನೆಲೆಯಲ್ಲಿ ಮತಗಳ ಅನರ್ಹಗೊಳಿಸಿದ್ದೇನೆ ಎಂದು ಎ.ಆರ್ ವೆಂಕಟೇಶ್ ಸಮಜಾಯಿಷಿ ಕೊಟ್ಟಿದ್ದು, ಯಾವುದೇ ಪರಿಶೀಲನೆ ನಡೆಸದೇ ಮತಗಳ ಅನರ್ಹ ಮಾಡಿದ್ದನ್ನು ಎ.ಆರ್ ವೆಂಕಟೇಶ್ ಒಪ್ಪಿಕೊಂಡಿದ್ದಾರೆ. ದೂರು ಅರ್ಜಿ ಬಂದರೆ ಕ್ರಮ ಕೈಗೊಳ್ಳುವ ಅಧಿಕಾರ ನನಗಿದೆ. ಹಾಗಾಗಿ 17 ಮತಗಳನ್ನು ಅನರ್ಹ ಮಾಡಿದ್ದೇನೆ ಎಂದು ಸಬೂಬು ಹೇಳಿದ್ದಾರೆ. ಸಹಕಾರ ಇಲಾಖೆಯ ಈ ಅಧಿಕಾರಿ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.