
: ಹಲವು ವರ್ಷಗಳಿಂದ ದುರಸ್ತಿ ಕಾಣದೆ ಸಂಗ್ರಹವಾಗಿದ್ದ ನೀರು ಪೋಲಾಗಿ ಹರಿಯಲು ಕಾರಣವಾಗಿದ್ದ ಗೇಟ್ಗಳ ದುರಸ್ತಿಗೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಒಟ್ಟು 4 ಕೋಟಿ ರೂ. ಅಂದಾಜು ಮೊತ್ತದಲ್ಲಿ ಜಲಾಶಯಕ್ಕೆ ಕಾಯಕಲ್ಪ ಕಲ್ಪಿಸುವ ಕಾಮಗಾರಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ತಾಲೂಕಿನ ರೈತರ ಜೀವನಾಡಿ ಎಂದೇ ಹೆಸರಾದ ಜಲಾಶಯದಲ್ಲಿ ಉತ್ತಮ ಮಳೆಯಾದರೆ ಬರೋಬ್ಬರಿ ಎರಡು ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗುತ್ತಿದೆ.

j3tvkannada
ಹಲವು ವರ್ಷಗಳಿಂದಲೂ ಭರ್ತಿಯಾಗದ ಜಲಾಶಯ ಈ ಹಿಂದಿನ ಶಾಸಕ ಎಸ್.ಭೀಮನಾಯ್ಕ ಅವಧಿಯಲ್ಲಿ ಬರೋಬ್ಬರಿ 13 ವರ್ಷದ ಬಳಿಕ ಮಳೆರಾಯನ ಕೃಪೆ ಮತ್ತು 150 ಕೋಟಿ ರೂ. ಅಂದಾಜು ಮೊತ್ತದಲ್ಲಿ ಜಲಾಶಯಕ್ಕೆ ತುಂಗಭದ್ರಾ ನದಿಯಿಂದ ಶಾಶ್ವತ ನೀರು ಕಲ್ಪಿಸಿದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿತ್ತು. ಜಲಾಶಯದ ಗೇಟ್ ದುರಸ್ತಿಗೊಂಡ ಹಿನ್ನೆಲೆಯಲ್ಲಿ ಸಂಗ್ರಹಗೊಂಡ ನೀರು ಪೋಲಾಗಿ ಹರಿಯಿತು. ನೀರು ಹಿಡಿಟ್ಟುಕೊಳ್ಳುವ ಕುರಿತಂತೆ ರೈತರ ಬೇಡಿಕೆ ಅಧಿಕವಾಯಿತು.

j3tvkannada
ಮುಳುಗು ತಜ್ಞರು ಮತ್ತು ಭದ್ರಾ ಮೇಲ್ದಂಡೆ ಯೋಜಯೆಯಡಿ ಕಾರ್ಯನಿರ್ವಹಿಸಿದ ತಜ್ಞರ ನೆರವಿನೊಂದಿಗೆ ಕೆಲ ತಿಂಗಳ ಹಿಂದೆ ಇಂದಿನ ಶಾಸಕ ನೇಮರಾಜನಾಯ್ಕ ಬೃಹತ್ ನೀರಾವರಿ ಇಲಾಖೆ ಮೂಲಕ ಜಖಂಗೊಂಡಿದ್ದ ಗೇಟ್ ದುರಸ್ತಿಗೊಳಿಸಿದರು. ಜಲಾಶಯದ 10 ಗೇಟ್ಗಳ ಪೈಕಿ 5,7 ಮತ್ತು 9ನೇ ಗೇಟ್ ಮೂಲಕ ನೀರು ಸೋರಿಕೆ ನಿರಂತರವಾಗಿತ್ತು. ಸಂಗ್ರಹಗೊಂಡ ಬಹುಪಾಲು ನೀರು ಹಗರಿಹಳ್ಳದ ಪಾಲಾಗಿತ್ತು. ಪರೋಕ್ಷವಾಗಿ ಹಲವು ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾದರೂ, ಜಲಾಶಯ ನಿರ್ಮಾಣದ ಮೂಲ ಉದ್ದೇಶ ಈಡೇರದಾಗಿತ್ತು. ಅಲ್ಲದೆ ಈ ಹಿಂದೆಯೆ ಕಾಯ್ದಿರಿಸಿದ್ದ 4 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತಂತೆ ಕನಿಷ್ಠ ನೀಲನಕ್ಷೆ ರೂಪಿಸಲು ಇಲಾಖೆಗೆ 2 ವರ್ಷ ಕಾಲಾವಕಾಶ ಹಿಡಿದಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ಇಲಾಖೆ ದುರಸ್ಥಿ ಕಾರ್ಯಕ್ಕೆ ಸಿದ್ಧತೆ ನಡೆಸಿದೆ.
ಜಲಾಶಯದ 10 ಗೇಟ್ಗಳನ್ನು ದುರಸ್ತಿ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ಜಲಾಶಯದಲ್ಲಿ ಸಂಗ್ರಹವಾಗಿದ್ದ ಉಳಿದಿದ್ದ 4 ಅಡಿಗಳಷ್ಟು ನೀರು ಖಾಲಿ ಮಾಡಲಾಗಿದೆ. ಸತತ 3 ದಿನ 2 ಗೇಟ್ಗಳನ್ನೆತ್ತಿ ನೀರು ಹೊರಬಿಡಲಾಗಿದೆ. ಪರಿಣಾಮವಾಗಿ ಹಗರಿಹಳ್ಳದ ಮೂಲಕ ಕಡಲಬಾಳು ಹಿನ್ನೀರು ಕಾಲುವೆಗಳ ಬಳಿ ನೀರು ಹರಿದಿದೆ. ಮಳೆಯಿಂದಾಗಿ ಜಲಾಶಯದ ಗೇಟ್ಗಳ ಬಳಿ ನೀರು ಸಂಗ್ರಹಗೊಂಡು ಕಾಮಗಾರಿಗೆ ಅಡ್ಡಿಯಾಗದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಒಟ್ಟು 10 ಗೇಟ್ಗಳು, ಬ್ರೇಕರ್ಗಳು ಮತ್ತು ಗೇಟ್ಗಳ ಬಳಿ ನೀರು ಸೋರಿಕೆ ತಡೆಯಾಗದಂತೆ ಎಡದಂಡೆ ಮತ್ತು ಬಲದಂಡೆ ವಾಲ್ಗಳ ಅಳವಡಿಕೆ ಸೇರಿ ನಾನಾ ಕಾಮಗಾರಿ ಕೈಗೆತ್ತಿಕೊಳ್ಳುವುದು ಯೋಜನೆಯಲ್ಲಿದೆ.