
ಬೆಂಗಳೂರುಗ್ರಾಮಾಂತರ: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಟೆಲಿಗ್ರಾಮ್ ಕೂಡ ಒಂದು. ಲಕ್ಷಾಂತರ ಜನರು ಟೆಲಿಗ್ರಾಮ್ ಆ್ಯಪ್ನ್ನು ಬಳಸುತ್ತಾರೆ. ಆದರೆ ಇದೇ ಟೆಲಿಗ್ರಾಮ್ ಆ್ಯಪ್ನ್ನು ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಕೆಲಸ ಕೊಡಿಸುವುದಾಗಿ ಮಹಾಮೋಸ ಮಾಡುತ್ತಿದ್ದಾರೆ. ಇದೀಗ ಅಂತಹದ್ದೆ ಒಂದು ಘಟನೆ ನಡೆದಿದೆ. ಪರಮೇಶ್ ಎಂಬ ಯುವಕ ಬರೋಬ್ಬರಿ 3.5 ಲಕ್ಷ ರೂ ಕಳೆದು ಕೊಂಡಿದ್ದಾನೆ.

j3tvkannada
ಟೆಲಿಗ್ರಾಮ್ ಆ್ಯಪ್ ಮೂಲಕ ಕೆಲಸ ನೀಡುವುದಾಗಿ ಯುವಕನೊಬ್ಬನಿಂದ 3.5 ಲಕ್ಷ ರೂ. ವಂಚಿಸಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೊದಲಿಗೆ ಕಡಿಮೆ ಮೊತ್ತವನ್ನು ಪಡೆದು, ಹಂತಹಂತವಾಗಿ ಹೆಚ್ಚಿನ ಮೊತ್ತವನ್ನು ಪಡೆದು ವಂಚಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೇಟಿಂಗ್ ಕೊಟ್ಟರೆ ಹಣ ಬರತ್ತೆ ಎಂದು ಕಿಡಿಗೇಡಿಗಳಿಂದ ಮಹಾಮೋಸ ಮಾಡಲಾಗುತ್ತಿದೆ. ಈ ವಂಚನೆ ಜಾಲಕ್ಕೆ ಸಿಲುಕಿ ಸಾಕಷ್ಟು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ.
ಕಡಿಮೆ ಹಣ ಕೊಟ್ಟು ಹೆಚ್ಚು ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತ ಲಕ್ಷ ಲಕ್ಷ ರೂ ಕೇಳುತ್ತಾರೆ. ಹೀಗೆ ಕೆಲಸ ಸಿಗುವ ಆಸೆಗೆ ಬಿದ್ದ ಯುವಕ ಪರಮೇಶ್ 3.5 ಲಕ್ಷ ರೂ ಕಳೆದು ಕೊಂಡಿದ್ದಾನೆ. ಮೊದಲ ಹಂತದಲ್ಲಿ 150 ರೂ ನಂತೆ 8 ಬಾರಿ ಹಣ ಪಡೆದಿದ್ದ. ಬಳಿಕ ಎರಡು ಸಾವಿರದಿಂದ ಹಂತ ಹಂತವಾಗಿ 3.5. ಲಕ್ಷ ರೂ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಹಣ ವಾಪಸ್ ಕೇಳಿದರೆ ಟ್ಯಾಕ್ಸ್ ಆಗತ್ತೆ ಮತ್ತೆ 1 ಲಕ್ಷ ರೂ ಕಟ್ಟಬೇಕಾತ್ತೆ ಎಂದು ವಂಚಿಸಿದ್ದಾರೆ.