
ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ರಂಗಾಯಣ ಕಲಬುರಗಿ, ಮಕ್ಕಳ ಹಬ್ಬ-2025, ಮಕ್ಕಳ ಬೇಸಿಗೆ ಶಿಬಿರ, ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಚಿಣ್ಣರ ರಂಗೋತ್ಸವದ ಉದ್ಫಾಟನಾ ಸಮಾರಂಭ 9 ಮತ್ತು 10 ರಂದು ಪ್ರಕಾಶ ಪೂಜಾರಿ ಮತ್ತು ತಂಡದ ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ನಡೆಯಿತು. ಎರಡು ದಿನ ಸಾಂಸ್ಕ್ರತಿ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಗಳಿಗೆ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.

j3tvkannada.in
ಡಾ.ಸುಜಾತ ಜಂಗಮ ಶೆಟ್ಟಿಯವರು ರಂಗಾಯಣಕ್ಕೆ ಸಹಾಯಧನ ಒದಗಿಸಲು ಮನವಿ ಮಾಡಿದರು. ಇವತ್ತು 1.5 ಕೋಟಿಯ ಅನುದಾನ ಕೆ.ಕೆ.ಆರ್.ಡಿ.ಬಿ. ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಬಯಲಾಟ, ನಾಟಕ ಗೀಗೀ ಪದ ಜನಪದಗಳು ಇಂದಿನ ದಿನಗಳಲ್ಲಿ ನಶಿಸುತ್ತವೆ. ನಾವೆಲ್ಲ ಇದಕ್ಕೆ ಪ್ರೋತ್ಸಾಹ ಕೊಡಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಶಾಸಕರಾದ ಎಂ.ವೈ ಪಾಟೀಲ ಅವರು ಹೇಳಿದರು.
ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ಅವರು ಮಾತನಾಡಿ, ಗೀಗಿ ಪದ ಡೊಳ್ಳು ಗುಣಿತ, ತತ್ವಪದಗಳು ಬಯಲಾಟ, ನಾಟಕಗಳನ್ನು ನಾವು ಮರೆತು ಬಿಟ್ಟು ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಇದನ್ನು ಬಿಟ್ಟು ನಾವೆಲ್ಲರೂ ಕಲೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಅವರು ತಿಳಿಸಿದರು. ಇಂದಿನ ಯುಗದಲ್ಲಿ ನಮ್ಮ ಪ್ರತಿಭೆಗಳಿಗೆ ನಾವು ಗುರುತಿಸಬೇಕಾದರೆ ನಾಟಕಗಳನ್ನು ಯಕ್ಷಗಾನ, ಡೊಳ್ಳುಗುಣಿತ ಗೀಗಿಪದಗಳನ್ನು ಉತ್ತೇಜಿಸಿ ನಮ್ಮ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ಆಗಬೇಕೆಂದರು.
ರಂಗಾಯಣ ನಿರ್ದೇಶಕಿ ಪ್ರಸ್ತಾವಿಕವಾಗಿ ಮಾತನಾಡಿ, ಇಂಥಹ ಬೇಸಿಗೆ ಶಿಬಿರಗಳನ್ನು ಏರ್ಪಡಿಸುವುದರಿಂದ ಮಕ್ಕಳಿಗೆ ಒಳ್ಳೆಯ ಜ್ಞಾನದ ಬೆಳವಣಿಯಾಗುತ್ತದೆ. ತಂದೆ ತಾಯಿಗಳು ಮಕ್ಕಳಿಗೆ ಬರೀ ಓದು ಓದು ಅಂತ ಮಾತ್ರ ಹೇಳುವುದು ತಪ್ಪು. ಮಕ್ಕಳು ಎಲ್ಲಾ ಕಲೆಗಳು, ಸಾಹಿತ್ಯ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ತರಬೇಕೆಂದರು. ಡಿ.ವೈಎಸ್.ಪಿ. ಸೈಬರ್ ಬಸವೇಶ್ವರ ಹೀರಾ ಪಾಸ್ತಾವಿಕವಾಗಿ ಮಾತನಾಡಿದರು. ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಸ್ವಾಗತಿಸಿದರು.
ಇನ್ನು ಶಿಬಿರದ ಮಕ್ಕಳಿಂದ ಡೊಳ್ಳು ಕುಣಿತ ಸಂಜುಕುಮಾರ ಬರಗಾಲಿ , ತಮಟೆ ವಾದನ ವಿಶ್ವನಾಥ ತೋಟ್ನಳ್ಳಿ, ನಾಟಕ:ರಾಜ ಮತ್ತು ವೃಕ್ಷ ದೇವತೆ: ಪ್ರಸ್ತತಿ ಕೃಷ ನದಿ ತಂಡ ರಚನೆ: ಶೈಲಿ ಪ್ರಭಾಕರ, ವಿನ್ಯಾಸ ಮತ್ತು ನಿರ್ದೇಶಕ ಭಾಗ್ಯಶ್ರೀ ಪಾಳ, ರಂಗಗೀತೆ: ಶರಣು ಹೇಳೇವು ಸ್ವಾಮಿ ನಾವು ಎಂಬೆಲ್ಲಾ ಕಾರ್ಯಕ್ರಮಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿಯಾದ ಎ.ಕೆ. ರಾಮಶೇಶ್ವರ, ಶರಣಬಸವೇಶ್ವರ ಸಂಸ್ಥಾನ ಕಾರ್ಯದರ್ಶಿಗಳಾದ ಬಸವರಾದ ದೇಶಮುಖ, ರಂಗ ಸಮಾಜದ ಸದಸ್ಯರಾದ ಮಹಾಂತೇಶ ಗಜೇಂದ್ರಗಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸೇರಿದಂತೆ ಮಕ್ಕಳ ಪಾಲಕರು ಭಾಗವಹಿಸಿದ್ದರು.