
ರಾಮನಗರ: ಎಕ್ಸ್ಪ್ರೆಸ್ ವೇ ಹೆಸರಿನಲ್ಲಿ ಕೆ.ಎಸ್.ಆರ್.ಟಿ.ಸಿ ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಿದೆ. ಬೆಂಗಳೂರಿನ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಆಗಮಿಸುವ ಬಸ್ಗಳಲ್ಲಿ ಎರಡು ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.ಇತ್ತೀಚಿಗೆ ಕೆ.ಎಸ್.ಆರ್.ಟಿ.ಸಿ ಟಿಕೆಟ್ ದರ ಹೆಚ್ಚಿಸಿ ಜನರ ಕೆಂಗಣ್ಣಿಗೆ ಗುರಿಯಾಗಿತ್ತು.ಇದರ ನಡುವೆ ಸಾಮಾನ್ಯ ಪ್ರಯಾಣ ಹಾಗೂ ಎಕ್ಸ್ಪ್ರೆಸ್ವೇ ಪ್ರಯಾಣ ಎಂದು ಮತ್ತಷ್ಟು ಸುಲಿಗೆಗೆ ಇಳಿದಿದೆ. ಬೆಂಗಳೂರಿನ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದಲೇ ಸಾಮಾನ್ಯವಾಗಿ ಮೈಸೂರು ಭಾಗಕ್ಕೆ ಬಸ್ಗಳು ಆಪ್ರೇಟ್ ಆಗುತ್ತವೆ.

j3tvkannada
ಬೆಂಗಳೂರು ಮೈಸೂರು ನೂತನ ಹೆದ್ದಾರಿ ನಿರ್ಮಾಣವಾದ ಬಳಿಕ ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಬೆಂಗಳೂರು ಮೈಸೂರು ನಾನ್ ಸ್ಟಾಪ್ ಹಾಗೂ ತಡೆ ಸಹಿತ ಪ್ರಯಾಣವನ್ನು ನೀಡುತ್ತಿದೆ. ಈ ತಡೆ ರಹಿತ ಸೇವೆಯಲ್ಲಿ ಉನ್ನತ ಸೇವೆ ಹಾಗೂ ಸಾಮಾನ್ಯ ಸೇವೆ ಒದಗಿಸುತ್ತಿದೆ. ನಾನ್ ಸ್ಟಾಪ್ಬಸ್ಗಳು ಸ್ಯಾಟ್ಲೈಟ್ ಬಸ್ ನಿಲ್ದಾಣ ಬಿಟ್ಟು ಕೆಂಗೇರಿ ಮುಖಾಂತರ ನೂತನ ಹೆದ್ದಾರಿ ಮೇಲೆ ಮೈಸೂರು ತಲುಪತ್ತವೆ. ತಡೆ ಸಹಿತ ಬಸ್ ಸೇವೆಗಳು ಕೆಂಗೇರಿ ಬಿಡದಿ, ರಾಮನಗರ ಮುಖಾಂತರ ಮೈಸೂರು ತಲುಪುತ್ತವೆ.
ಇತ್ತೀಚಿಗೆ ಪ್ರಯಾಣಿಕರಿಗೆ ಮತ್ತೊಂದು ಸೇವೆ ಒದಗಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ಸೇವೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಗಳು ಕುಂಬಳಗೂಡು ಹಾಗೂ ಬಿಡದಿಗೆ ಸೇವೆ ಒದಗಿಸುವುದನ್ನೇ ನಿಲ್ಲಿಸುತ್ತಿವೆ. ಅಂದರೆ ಸ್ಯಾಟ್ಲೈಟ್ನಿಂದ ಆರಂಭವಾಗುವ ಸೇವೆ ಕೆಂಗೇರಿ ಮುಖಾಂತರ ಹೊಸ ಹೆದ್ದಾರಿ ಟೋಲ್ನಿಂದ ರಾಮನಗರ ತಲುಪುತ್ತಿವೆ. ಇದರಿಂದ ಬಿಡದಿ ಹಾಗೂ ಕುಂಬಳಗೂಡು ಭಾಗದ ಜನತೆಗೆ ಕೆಎಸ್ಆರ್ಟಿಸಿ ಬಸ್ ತನ್ನ ಸೇವೆ ಒದಗಿಸುವುದನ್ನು ಕಡಿಮೆ ಮಾಡುತ್ತಿದೆ.

j3tvkannada
ಈ ಎರಡು ಸೇವೆಗಳಿಗೆ ಪ್ರತ್ಯೇಕವಾದ ದರ ನಿಗದಿ ಮಾಡಲಾಗಿದೆ. ಕೆಂಗೇರಿ, ಬಿಡದಿ ಮುಖಾಂತರ ರಾಮನಗರಕ್ಕೆ ಆಗಮಿಸಿದರೆ ಪ್ರತಿಯೊಬ್ಬರಿಗೂ 53 ರೂ.ಚಾರ್ಜ್ ಆಗುತ್ತದೆ. ಕೆಂಗೇರಿ ಮುಖಾಂತರ ನೂತನ ಹೆದ್ದಾರಿ ಮಾರ್ಗದಿಂದ ರಾಮನಗರಕ್ಕೆ ಆಗಮಿಸಿದರೆ ಪ್ರತಿಯೊಬ್ಬರಿಂದ 73ರೂ. ವಸೂಲಿ ಮಾಡಲಾಗುತ್ತಿದೆ. ಅಂದರೆ ಪ್ರತಿ ಪ್ರಯಾಣಿಕರಿಂದ 20ರೂ. ಹೆಚ್ಚುವರಿ ವಸೂಲಿ ಮಾಡುತ್ತಿದೆ. ಇನ್ನು ಹೆಚ್ಚುವರಿ ವಸೂಲಿ ಮಾಡುತ್ತಿರುವುದಕ್ಕೆ ಜನತೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾನ್ಯ ದಿನದಲ್ಲಿಯೇ ಬಿಡದಿಗೆ ಬಸ್ ಸಮಸ್ಯೆಯಾಗುತ್ತಿದೆ. ವಾರಾಂತ್ಯ ಹಾಗೂ ಹಬ್ಬದ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಮಸ್ಯೆ ಇದೆ. ಪರಿಸ್ಥಿತಿ ಈ ರೀತಿ ಇರುವಾಗ ನೂತನ ಹೆದ್ದಾರಿಯಿಂದ ಸೇವೆ ಒದಗಿಸಿದರೆ,ಬಿಡದಿ ಮೂಲಕ ಬಸ್ ಸಂಚಾರ ಕಡಿಮೆ ಆದಂತೆ ಆಗುತ್ತದೆ.
ತಮ್ಮದಲ್ಲದ ತಪ್ಪಿಗೆ ಹೆಚ್ಚುವರಿ ಹಣ ನೀಡಿ ಬಸ್ ಸೇವೆ ಪಡೆಯಬೇಕಾದ ಅನಿವಾರ್ಯತೆಯಲ್ಲಿ ಪ್ರಯಾಣಿಕರು ಇದ್ದರು. ನೂತನ ಬೆಂಗಳೂರು ಮೈಸೂರು ಹೆದ್ದಾರಿಯ ಟೋಲ್ನಲ್ಲಿ ಬಸ್ಸುಗಳಿಗೆ 580 ರೂ. ಚಾರ್ಜ್ ಮಾಡಲಾಗುತ್ತಿದೆ. ಎರಡು ಬದಿಯಿಂದ 870ರೂ. ಜಾರ್ಜ್ ಮಾಡಲಾಗುತ್ತದೆ. ಇನ್ನು ನೂತನ ಹೆದ್ದಾರಿ ಮುಖಾಂತರ ರಾಮನಗರಕ್ಕೆ ಆಗಮಿಸುವ ಬಸ್ಗಳು ಬಿಡದಿ ಟೋಲ್ ಒಂದರಲ್ಲಿ ಮಾತ್ರ ಹಣ ಪಾವತಿಸುತ್ತವೆ. ಹಾಗಾಗಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದು, ಕೆ.ಎಸ್.ಆರ್.ಟಿ.ಸಿಗೆ ಲಾಭವಾಗುತ್ತಿದೆ. ಇನ್ನು ಬಿಡದಿ ತನಕ ಬಿ.ಎಂ.ಟಿ.ಸಿ ಬಸ್ಗಳು ಸಂಚಾರ ನಡೆಸುತ್ತವೆ. ಹಾಗಾಗಿ ಈ ತನಕ ಸಮಸ್ಯೆಯಾಗುತ್ತಿಲ್ಲ.
ಬಿಡದಿ ಬಿಟ್ಟು ರಾಮನಗರ ಮುಖಾಂತರ ಮೈಸೂರು ಮಂಡ್ಯ ತಲುಪುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮುಂದಕ್ಕೆ ಚಲಿಸಬೇಕೆಂದರೆ ಬಸ್ ಬರಬೇಕು. ಸಂಚಾರ ನಡೆಸುವ ಬಸ್ಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಬಿಡದಿ ಮುಖಾಂತರ ಬಸ್ ಸಂಚಾರ ದಿನ ಕಳೆದಂತೆ ಕಡಿಮೆ ಆಗುತ್ತಿದೆ. ಇದರ ನಡುವೆ ಹೆದ್ದಾರಿ ಬಳಕೆ ಮಾಡಿಕೊಂಡು ರಾಮನಗರಕ್ಕೆ ಬಂದರೆ, ಬಿಡದಿ ಸುತ್ತಮುತ್ತಲಿನ ಭಾಗದ ಜನತೆ ಕೆ.ಎಸ್.ಆರ್.ಟಿ.ಸಿ ಸೇವೆಯಿಂದ ವಂಚಿತರಾಗುತ್ತಾರೆ. ಕೂಡಲೆ ಇಲಾಖೆ ಈ ತಾರತಮ್ಯವನ್ನು ಕೈ ಬಿಡಬೇಕು ಎನ್ನುತ್ತಾರೆ ರಾಜು ಎಂ.ಎನ್.ಆರ್, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ರಾಮನಗರ.