
ವಿಜಯನಗರ: ಜಿ.ಕೋಡಿಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕತ್ತರಿಸಿ ಕದ್ದೊಯ್ದಿದ್ದಾರೆ.

j3tvkannada
ಗ್ರಾಮದ ಕೃಷಿಕ ಸುಧೀರ್ ವರ್ಮಾ ಅವರು ಜಮೀನಿನ ಬದುವಿನಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಿದ್ದರು. ಏಳೆಂಟು ವರ್ಷದ 15ಕ್ಕೂ ಹೆಚ್ಚು ಮರಗಳನ್ನು ಕಳ್ಳರು ಯಂತ್ರದ ಗರಗಸದಿಂದ ಕತ್ತರಿಸಿದ್ದಾರೆ. ನಾಲ್ಕು ಜನರಿಂದ ತಂಡ ತೋಟಕ್ಕೆ ನುಗ್ಗಿ ಮರಗಳನ್ನು ಕತ್ತರಿಸಿರುವುದು ಮತ್ತು ಅವುಗಳನ್ನು ತೆಗೆದುಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ತಂಬ್ರಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಕೃಷಿಕ ಸುಧೀರ್ ವರ್ಮಾ ತಿಳಿಸಿದ್ದಾರೆ.