
ಬೆಂಗಳೂರು:ಕರ್ನಾಟಕವು ಬೇರೆ ರಾಜ್ಯಗಳಿಗೆ ಹೋಲಿಸಿದರೆ,ಹೆಚ್ಚಿನ ಬಿಸಿಲಿನ ಬೇಗೆಯನ್ನು ಎದುರಿಸುತ್ತಿದೆ. ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಶಾಖದ ತಾಪವು ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದ ನಿರೀಕ್ಷೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆಯನ್ನು ನೀಡಿದೆ. ಏಕೆಂದರೆ ಬಿಸಿಲಿನ ತಾಪಮಾನವು 37-39 ಡಿಗ್ರಿ ಸೆಲ್ಸಿಯಸ್ʼನ ವರೆಗು ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ಆರೋಗ್ಯ,ಇಲಾಖೆಯು ತಿಳಿಸಿದೆ.

ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು, ಟೋಪಿಗಳು ಅಥವಾ ಛತ್ರಿಗಳನ್ನು ಧರಿಸುವುದು ಮತ್ತು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸುವುದು ಸೂಕ್ತ ಎಂದು ಸಲಹೆ ನೀಡಿದೆ. ಹೆಚ್ಚಿನ ತಾಪಮಾನದಲ್ಲಿ ದೀರ್ಘಕಾಲದವರೆಗೆ ಓಡಾಡುವುದರಿಂದ ಶಾಖದ ಹೊಡೆತ (ಸ್ಟ್ರೋಕ್) ಬಳಲಿಕೆ ಮತ್ತು ಶಾಖ ಸಂಬಂಧಿತ ಕಾಯಿಲೆಗಳು ಉಂಟಾಗಬಹುದು. ವಿಶೇಷವಾಗಿ ಶಿಶುಗಳು, ಗರ್ಭಿಣಿಯರು, ಹೊರಾಂಗಣ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಎಚ್ಚರಿಸಿದೆ.