
ವಿಜಯನಗರ: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲ್ಲೂಕಿನ ಉತ್ತಂಗಿಯ ರೈತ ಮೂಲಿಮನಿ ಶರಣಪ್ಪ, ಕಟಾವು ಹಂತದ ಈರುಳ್ಳಿ ಫಸಲು ಇರುವ ಮೂರು ಎಕರೆ ಹೊಲವನ್ನು ಶುಕ್ರವಾರ ಕುರಿ ಮೇಯಲು ಬಿಟ್ಟು ನಾಶಪಡಿಸಿದ್ದಾರೆ.

j3tvkannada
ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್ಗೆ 1,000 ದಿಂದ 800ರಷ್ಟು ಮಾತ್ರ ಇದೆ. ಈರುಳ್ಳಿ ಕಿತ್ತು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು 50 ಕೆಜಿಯ ಪ್ರತಿ ಪಾಕೀಟ್ಗೆ 300 ರಿಂದ 400 ಖರ್ಚು ತಗುಲುತ್ತದೆ. ಕಟಾವು, ಸಾಗಣೆ ವೆಚ್ಚದ ಹಣವೂ ಸಿಗದ ಕಾರಣ ರೈತರು ಸ್ವತಃ ಬೆಳೆ ನಾಶಕ್ಕೆ ಮುಂದಾಗಿದ್ದಾರೆ. ‘ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲು 1.30 ಲಕ್ಷ ಖರ್ಚು ಮಾಡಿರುವೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ಮಾರಾಟದಿಂದ ಬಂದ ಹಣ ಕಟಾವು ಖರ್ಚಿಗೂ ಸಾಲುವುದಿಲ್ಲ’ ಎಂದು ಶರಣಪ್ಪ ಹೇಳಿದರು.