
ಕಲಬುರುಗಿ :ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಸುತ್ತಲೂ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಪೋಚಾವರಂ ಗ್ರಾಮದ ಅರ್ಜುನ ಶಿರವಾಟಿ ಎಂಬ ರೈತರ ಎರಡು ಎಕರೆ ಮೆಕ್ಕೆಜೋಳ ನೆಲಸಮವಾಗಿದೆ.

j3tvkannada
ಜೋಳ ತೆನೆಬಿಟ್ಟು ಕಾಳುಗಳು ಹಾಲು ತುಂಬಿಕೊಳ್ಳುತ್ತಿದ್ದವು. ಇದರಿಂದ ರೈತರಿಗೆ ₹2 ಲಕ್ಷ ನಷ್ಟ ಉಂಟಾಗಿದೆ. ತಾಲ್ಲೂಕಿನ ಗಡಿಲಿಂಗದಳ್ಳಿಯಲ್ಲಿ ಸಿಡಿಲು ಬಡಿದು ನೈನಮ್ಮ ಮುನ್ನಾಳ ಎಂಬುವವರ ಹಸು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಮಳೆಗೆ 25 ವಿದ್ಯುತ್ ಕಂಬಗಳು ಧರೆಗುರುಳಿದರೆ, 6 ಟಿಸಿಗಳು ಹಾಳಾಗಿವೆ. ಮಳೆ ಬಿರುಗಾಳಿಯಿಂದ ಏಪ್ರಿಲ್ ತಿಂಗಳಲ್ಲಿಯೇ ಧರೆಗುರುಳಿದ ವಿದ್ಯುತ್ ಕಂಬಗಳ ಸಂಖ್ಯೆ 75ಕ್ಕೇರಿದರೆ, 15 ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿವೆ. ಇದರಿಂದ ಜೆಸ್ಕಾಂಗೆ ಸುಮಾರು ₹ 15 ಲಕ್ಷದಿಂದ ₹20 ಲಕ್ಷ ನಷ್ಟ ಉಂಟಾಗಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾಮಣ್ಣ ಇಂಜಳ್ಳಿ ತಿಳಿಸಿದ್ದಾರೆ.