

j3tvkannada
ಧಾರವಾಡ: ಸ್ವರ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಏ.20ರಂದು ನಗರದಲ್ಲಿ ‘ಅನಾಹತ’ ವಾರ್ಷಿಕ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಶ್ರೀಹರಿ ದಿಗ್ಗಾವಿ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂರು ವೆಂಕಟರಾವ್ ಭವನದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.
ರಂಗಕರ್ಮಿ ಶಶಿಧರ ನರೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪಾಲ್ಗೊಳ್ಳುವರು. ಸಿತಾರ್ ವಾದಕ ಶ್ರೀನಿವಾಸ ಜೋಶಿ, ಪಂ. ಅಶೋಕ ನಾಡಿಗೇರ, ಪಂ.ರಾಚಯ್ಯ ಹಿರೇಮಠ, ಉಸ್ತಾದ ಶಫೀಕ ಖಾನ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಗೋವಾದ ಉದಯ ಕುಲಕರ್ಣಿ ತಬಲಾ ಸೋಲೊ, ಬಸವರಾಜ ವಂದಲಿ ಹಿಂದೂಸ್ತಾನಿ ಗಾಯನ, ಹೈದರಾಬಾದಿನ ಅರಣ್ಯಕುಮಾರ ಸಿತಾರ ವಾದನ ಸಹಿತ ವಿವಿಧ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಶ್ರುತಿ ದಿಗ್ಗಾವಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.