

j3tvkannada
ಚಾಮರಾಜನಗರ : ಗ್ರಾಮದ ಬಳಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಸೋಮವಾರ ಹಲ್ಲೆ ನಡೆಸಿದ್ದ ಇರಸವಾಡಿ ಗ್ರಾಮದ ಪುಟ್ಟಸ್ವಾಮಿ ಹಾಗೂ ಕೃಷ್ಣಶೆಟ್ಟಿ ಎಂಬುವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಚಾಮರಾಜನಗರಕ್ಕೆ ತೆರಳುವಾಗ ಬಸ್ಗೆ ಕೈ ತಡೆದಿದ್ದಾರೆ. ಆದರೆ, ಚಾಲಕ ಬಸ್ ನಿಲ್ಲಿಸಲಿಲ್ಲ. ಇದರಿಂದಾಗಿ ಬಸ್ ಮತೆ ಚಾಮರಾಜನಗರದಿಂದ ವಾಪಸಾಗುತ್ತಿದ, ವೆ.ಕೆ.ಮೋಳೆ ಬಳಿ ಅಡಗಟಿ, ಚಾಲಕ ವಿಜಯ್ ಕುಮಾರ್ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೊಡಲಿಯಿಂದ ಕೆನ್ನೆಗೆ ಹೊಡೆದು ರಕ್ತಗಾಯ ಉಂಟುಮಾಡಿದ್ದರು. ಈ ವೇಳೆ ಆಟೋ ಚಾಲಕರು ಗಲಾಟೆ ನಿಯಂತ್ರಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಶುಶೂಷೆಗೆ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್ಐ ಆಕಾಶ್ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.