
ಉಡುಪಿ:ಬಳ್ಳಾರಿಯವಳಾದರೂ ನನ್ನನ್ನು ಉಡುಪಿ ಜಿಲ್ಲೆಯ ಜನತೆ ಮನೆ ಮಗಳಂತೆ ಕಾಣುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು ಎಂದು ಜಾನಪದ ಕಲಾವಿದೆ ಬಿ. ಮಂಜಮ್ಮ ಜೋಗತಿ ಹೇಳಿದರು.

j3tvkannada
“ಉಡುಪಿಯಲ್ಲಿ ಸಾಕಷ್ಟು ಗೌರವಕ್ಕೆ ಪಾತ್ರಳಾಗಿದ್ದೇನೆ. ಅದರಂತೆ ಕೋಡಿ ಕನ್ಯಾಣದ ರಾಮ ಪರ್ವ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಆಡಿಕೊಳ್ಳುವವರಿಗೆ ತಲೆ ಕೆಡಿಸಿಕೊಳ್ಳಬೇಡಿ. ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಭಗವಂತ ಆಶೀರ್ವಾದ ನೀಡುತ್ತಾನೆ. ಕಲಾವಿದರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು’ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಮ ಪರ್ವ ಪ್ರಶಸ್ತಿ ಪ್ರದಾನ ಮಾಡಿದರು. ಬಳಗದ ಅಧ್ಯಕ್ಷ ಪುನಿತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಕಿರಣ್ ಕುಮಾರ್ ಕೊಡ್ಡಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್, ಶಿಕ್ಷಕ ವಿಜಯ ನಾಯರಿ, ಕೋಡಿ ರಾಮ ಪ್ರಸಾದ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಗನಾಥ ಅಮೀನ್, ಉದ್ಯಮಿ ಪ್ರಜ್ವಲ್ ಶೆಟ್ಟಿ, ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ, ಮತ್ಯೋದ್ಯಮಿ ಶಂಕರ ಕುಂದರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ ಕುಮಾರ್ ಶೆಟ್ಟಿ ಇದ್ದರು.
ರಾಮಪರ್ವದ ಅಂಗವಾಗಿ 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಕ್ತದಾನ ಶಿಬಿರ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸದಸ್ಯ ನಿಖೀಲ್ ಕರ್ಕೇರ ಸ್ವಾಗತಿಸಿದರು.