ಸಿರುಗುಪ್ಪ: ನಗರದಲ್ಲಿನ 14 & 18 ವಾರ್ಡುಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್ ಚರಂಡಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಭೂಮಿ ಪೂಜೆ ಮಾಡುವ ಮೂಲಕ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ
ನೀಡಿದರು.. 18ನೇ ವಾರ್ಡಿನಲ್ಲಿ ಒಟ್ಟು 59 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಕರಿಬಸಪ್ಪ ನಗರಸಭೆ ಅಧ್ಯಕ್ಷೆ ರೇಣುಕಮ್ಮ ಬಿ.ವೆಂಕಟೇಶ್ ನಗರಸಭೆಯ ಸದಸ್ಯರಾದ ಹೆಚ್. ಗಣೇಶ್, ಚಿದಾನಂದರಾಯುಡ, ಮುಖಂಡರಾದ
ಬಿ.ಎಂ.ಹರ್ಷ ನಾಯಕ, ಬಾಗೇವಾಡಿ ಮಾಧವಯ್ಯ ಶೆಟ್ಟಿ, ಇಬ್ರಾಂಪುರ ಸುರೇಂದ್ರ, ಪವನ್ ದೇಸಾಯಿ, ಇಂಜಿನಿಯರ್ ಅನಿಲ್ ಕುಮಾರ್, ಮುಖಂಡರಾದ ಗೊರವರ ಶ್ರೀನಿವಾಸ್, ಬಿ. ಉಮೇಶ್ ಗೌಡ, ಜಿ.ರಾಂಮೋಹನ್ ಅಡಿವೆಪ್ಪ, ವಿಜಯ್ ಕುಮಾರ್, ಗುಂಡಪ್ಪ, ರಘು, ಕಲೀಲ್ ಸಾಬ್, ಚಂದ್ರಪ್ಪ, ಹುಸೇನ್ ಭಾಷಾ, ಆಲಂಭಾಷಾ ,ಶಿವಕುಮಾರ್ ನವೀನ್ ಹಾಗೂ ಕಾರ್ಯಕರ್ತರು ಅಭಿಮಾನಿಗಳು ಇದ್ದರು.