
ಶಿರಾ: ಪ್ರತಿನಿತ್ಯ ಯೋಗ ಮತ್ತು ಪ್ರಾಣಾಯಾಮ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದು ಉಪ ತಹಶೀಲ್ದಾರ್ ಮಂಜುನಾಥ್ ಹೇಳಿದರು.
ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ಮಕ್ಕಳ ಚೈತನ್ಯ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಗ ಸೌಂದರ್ಯಕ್ಕೆ ಯೋಗಾಸನ, ಉಸಿರಾಟಕ್ಕೆ ಪ್ರಾಣಾಯಾಮ ಮಾಡುವ ಮೂಲಕ ಮನುಷ್ಯ ಸದಾ ಲವಲವಿಕೆಯಿಂದ ಇರಬಹುದು ಎಂದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆರ್.ಲಕ್ಷ್ಮಣ್ ಮಾತನಾಡಿ, 20 ದಿನಗಳ ಶಿಬಿರದಲ್ಲಿ ನುರಿತ ಯೋಗ ಶಿಕ್ಷಕರು ಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ದೇಸಿ ಆಟ, ಶ್ಲೋಕ-ಮಂತ್ರ ಪಠಣ, ಹಬ್ಬಗಳ ಆಚರಣೆ ವಿಶೇಷತೆ, ಒಗಟು, ಗಾದೆ, ಬುದ್ದಿಗೆ ಕಸರತ್ತು ನೀಡುವ ಪ್ರಶ್ನೆಗಳು, ಮಾತೃ ಭೋಜನ, ರಾಮಾಯಣ-ಮಹಾಭಾರತ ಕಥೆಗಳು, ಭಜನೆ, ದೇಶದ ಇತಿಹಾಸ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾವುದು ಎಂದರು.
ಯೋಗ ಶಿಕ್ಷಕರಾದ ಬಿ.ಗೋವಿಂದರಾಜು, ಪಿ.ಸಿದ್ದಪ್ಪ, ಮಾತನಾಡಿದರು. ಯೋಗ ಶಿಕ್ಷಕರಾದ ಕವಿತಾ ಲಕ್ಷ್ಮಣ್, ಚಂದ್ರಕಲಾ, ಶೇಖರ್, ದೊಡ್ಡಕಾಮಣ್ಣ, ವಸಂತಕುಮಾರಿ, ಸುಶೀಲ, ಉಮಾ ರಮೇಶ್, ಹೇಮಂತ್ ಕುಮಾರ್ ಹಾಜರಿದ್ದರು.