
ಚಿಕ್ಕಬಳ್ಳಾಪುರ: ವರದಹಳ್ಳಿ ಗ್ರಾಮದಲ್ಲಿ, ಮುಂದುವರೆದ ಆರೋಗ್ಯ ತಪಾಸಣೆ. ವರದಹಳ್ಳಿಯಲ್ಲಿ ಹಕ್ಕಿಜ್ವರ ಹಿನ್ನಲೇ ಹೆಚ್ಚಾದ ತಪಾಸಣೆ, ವರದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಡಳಿತ. ಒಂದು ತಾಲೂಕಿಗೆ 6 ತಂಡಗಳಂತೆ ರಚಿಸಿ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು, ವರದಹಳ್ಳಿಯಲ್ಲಿ ಮೂರು ತಂಡಗಳನ್ನು ಮಾಡಿರುವ ಪಶುಸಂಗೋಪನಾ ಇಲಾಖೆ ಪ್ರತಿ ಮನೆ ಮನೆಗೂ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ವರದಹಳ್ಳಿಗೆ ಪಶುಸಂಗೋಪನಾ ನಿರ್ದೇಶಕ ಡಾ ಶಿವರುದ್ರಪ್ಪ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಕ್ಕಿ ಜ್ವರ ಹಿನ್ನೆಲೆ ಗ್ರಾಮದಲ್ಲಿದ್ದ ಎಲ್ಲ ಕೋಳಿಗಳನ್ನು ಸಾಮೂಹಿಕ ಹತ್ಯೆ ವಿಲೇವಾರಿ ಮಾಡಲಾಗಿದೆ. ಹತ್ಯೆ ವಿಲೇವಾರಿ ಮಾಡಲಾದ ಕೋಳಿಗಳ ಮಾಲೀಕರಿಗೆ ಶೀಘ್ರದಲ್ಲಿಯೇ ಪರಿಹಾರ ನೀಡಲಾಗುವುದು ಎಂದು
ಪಶುಸಂಗೋಪನಾ ನಿರ್ದೇಶಕರಾದ ಡಾ.ಶಿವರುದ್ರಪ್ಪ ಮಾಹಿತಿ ನೀಡಿದ್ದಾರೆ.