
ಬೆಂಗಳೂರು ಗ್ರಾಮಾಂತರ : ಆನೇಕಲ್ ತಾಲ್ಲೂಕಿನ ಮಾಯಸಂದ್ರದಲ್ಲಿ ಭಾರಿ ಗಾಳಿಯಿಂದಾಗಿ ಮರವೊಂದು ಧರೆಗುರುಳಿದ್ದರಿಂದ ವಾಹನಗಳು ಜಖಂಗೊಂಡಿವೆ.

j3tvkannada
ಸಂಜೆ ಸುರಿದ ಭಾರಿ ಮಳೆ ಹಾಗೂ ಭಾರಿ ಬಿರುಗಾಳಿಯಿಂದ ಮಾಯಸಂದ್ರ ಧರ್ಮರಾಯ ದೇವಾಲಯದ ಮುಂಭಾಗದ ಬೃಹತ್ ಮರ ಬಸ್ ಹಾಗೂ ವಾಹನಗಳ ಬುಡ ಸಮೇತ ಮೇಲ ಉರುಳಿ ಬಿದ್ದಿದೆ. ಮರದ ಅಡಿ ನಿಲ್ಲಿಸಿದ್ದ ಬಸ್, ಟೆಂಪೋ, ಎರಡು ಇತರ ವಾಹನ ಸೇರಿದಂತೆ ಹಲವಾರು ವಾಹನಗಳು ಜಖಂಗೊಂಡಿವೆ. ಮರದ ಸುತ್ತಮುತ್ತಲಿದ್ದ ಜನರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ತಾಲ್ಲೂಕಿನಾದ್ಯಂತ ಭಾರಿ ಗಾಳಿ ಮತ್ತು ಮಳೆ ಸುರಿಯಿತು. ಮೂರ್ನಾಲ್ಕು ತಾಸಿಗೂ ಹೆಚ್ಚು ಮಳೆ ಸುರಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.