
ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 40 ಸಾವಿರ ಮನೆಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ. ಅದರಲ್ಲೂ 120 ಸ್ಲಂಗಳಲ್ಲಿ ಬಹುತೇಕ ಮನೆಗಳನ್ನು ನಾಲಾ ಅತಿಕ್ರಮಣ ಮಾಡಿ ನಿರ್ಮಿಸಲಾಗಿದ್ದು, ಅಂತಹ ಮನೆಗಳನ್ನು ಸ್ಥಳಾಂತರಿಸಿ ಮಳೆಗಾಲದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಕಳೆದ ವಾರವಷ್ಟೇ ಜಿಲ್ಲೆಯಲ್ಲಿ ಸುರಿದ ಮಳೆಗೆ 1,701 ಮನೆಗಳಿಗೆ ನೀರು ನುಗ್ಗಿದೆ. ಈ ಪೈಕಿ ಹುಬ್ಬಳ್ಳಿ ನಗರವೊಂದರಲ್ಲಿಯೇ 1,307 ಮನೆಗಳಿಗೆ ನೀರು ಹೊಕ್ಕಿದ್ದು, ಈ ಎಲ್ಲ ಮನೆಗಳನ್ನು ನಾಲಾ ಮೇಲೆ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಧಾರವಾಡ ನಗರದಲ್ಲೂ ನಾಲಾ, ಕೆರೆಗೆ ಹರಿದು ಬರುವ ಜಲಮೂಲದ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರಿಂದ ಪ್ರತಿ ಮಳೆಗಾಲದಲ್ಲಿಯೂ ಅವಳಿ ನಗರ ಕೆರೆಯಂತಾಗುತ್ತಿದೆ. ಹೀಗಾಗಿ ಈ ಒತ್ತುವರಿ ತೆರವುಗೊಳಿಸುವ ಅನಿವಾರ್ಯತೆ ಬಗ್ಗೆಯೂ ಈಗ ಆಲೋಚಿಸಲಾಗುತ್ತಿದೆ.

j3tvkannada
ಇಂತಹ ಮನೆಗಳು ಬಹುತೇಕ ಕೊಳಚೆ ಪ್ರದೇಶಗಳಲ್ಲಿ ಇದ್ದಿದ್ದರಿಂದ ನಿವಾಸಿಗಳು ಬಡವರು. ಹೀಗಾಗಿ ಅವರಿಗಾಗಿ ಗುಂಪು ಮನೆ ನಿರ್ಮಿಸಿ ಅಲ್ಲಿಗೆ ಅವರೆಲ್ಲರನ್ನೂ ಸ್ಥಳಾಂತರಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಆಯುಕ್ತರು ವಿವರಿಸಿದ್ದಾರೆ. ಇದಕ್ಕೆ ಸಚಿವ ಸಂತೋಷ ಲಾಡ್ ಒಪ್ಪಿಗೆ ಸೂಚಿಸಿ ಅಧ್ಯಯನ ನಡೆಸಲು ಸೂಚಿಸಿದ್ದಾರೆ. ಇದು ಜಾರಿಗೊಂಡರೆ ಇದು ಹುಬ್ಬಳ್ಳಿ ಧಾರವಾಡ ನಗರದ ಬೃಹತ್ ಯೋಜನೆ ಆಗಲಿದೆ. ಅವೈಜ್ಞಾನಿಕ ನಗರ ನಿರ್ಮಾಣದ ಜತೆಗೆ ಕೆಲವರು ರಸ್ತೆ, ನಾಲಾ, ಕೆರೆ, ಚರಂಡಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ನೀರು ಸುಲಭವಾಗಿ ಹರಿದು ಹೋಗುತ್ತಿಲ್ಲ.
ಕೆಲವೆಡೆ ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲ. ಹೀಗಾಗಿ ಧಾರವಾಡ ಕೆ.ಎಂ.ಎಫ್, ಟೋಲ್ನಾಕಾ, ಉಣಕಲ್ ಕೆರೆ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮನೆಗಳಿಗೂ ನೀರು ನುಗ್ಗುತ್ತಿದೆ. ಇದನ್ನು ತಡೆಯಲು ಈ ಗುಂಪು ಮನೆ ಯೋಜನೆ ಪ್ರಸ್ತಾವ ಸೂಕ್ತವೆನಿಸಿದ್ದು, ಇದಕ್ಕೆ ಸಾವಿರಾರು ಕೋಟಿ ರೂ. ಅನುದಾನ ಬೇಕಾಗಲಿದೆ. ಅದಕ್ಕೂ ಮುಂಚೆ ಎಷ್ಟು ಮನೆಗಳ ಸ್ಥಳಾಂತರ ಆಗಬೇಕು? ಎಂಬುದರ ಅಧ್ಯಯನ ನಡೆಸುವುದು ಜರೂರಾಗಿದೆ. ಅವೈಜ್ಞಾನಿಕ ನಗರ ನಿರ್ಮಾಣದ ಜತೆಗೆ ಕೆಲವರು ರಸ್ತೆ,
ಹೀಗಾಗಿ ಧಾರವಾಡ ಕೆ.ಎಂ.ಎಫ್, ಟೋಲ್ನಾಕಾ, ಉಣಕಲ್ ಕೆರೆ ಬಳಿ ರಸ್ತೆಮೇಲೆ ನೀರು ಹರಿಯುತ್ತಿದೆ. ಮನೆಗಳಿಗೂ ನೀರು ನುಗ್ಗುತ್ತಿದೆ. ಇದನ್ನು ತಡೆಯಲು ಈ ಗುಂಪು ಮನೆ ಯೋಜನೆ ಪ್ರಸ್ತಾವ ಸೂಕ್ತ ಎಣಿಸಿದ್ದು, ಆದರೆ ಇದಕ್ಕೆ ಸಾವಿರಾರು ಕೋಟಿ ರೂ. ಅನುದಾನ ಬೇಕಾಗಲಿದೆ. ಅದಕ್ಕೂ ಮುಂಚೆ ಎಷ್ಟು ಮನೆಗಳ ಸ್ಥಳಾಂತರ ಆಗಬೇಕು? ಎಂಬುದರ ಅಧ್ಯಯನ ನಡೆಸುವುದು ಜರೂರಾಗಿದೆ.
ನಾಲಾ, ಚರಂಡಿಗಳ ಅತಿಕ್ರಮಣ ಪಾಲಿಕೆ ಹಾಗೂ ಸರಕಾರಕ್ಕೂ ಪರೋಕ್ಷವಾಗಿ ಆರ್ಥಿಕ ಹೊರೆ ಹೇರುತ್ತಿದೆ. ಜನರ ನೆಮ್ಮದಿ ಕಸಿದುಕೊಂಡು ರಸ್ತೆ, ಚರಂಡಿಗಳ ಹಾನಿಗೂ ಕಾರಣ ಆಗುತ್ತಿದೆ. ಕಳೆದ 10 ದಿನಗಳು ಸುರಿದ ಮಳೆಗೆ ಹುಬ್ಬಳ್ಳಿ ಧಾರವಾಡ ಅವಳಿನಗರದ 63 ಕಿ.ಮೀ ಉದ್ದದ ರಸ್ತೆಗಳಿಗೆ ಹಾನಿಯಾಗಿದೆ. ಇದರ ದುರಸ್ತಿಗೆ 33.67ಕೋಟಿ ರೂ. ವ್ಯಯಿಸಬೇಕಾಗಿದೆ. 22.66 ಕಿ.ಮೀ ಉದ್ದದ ಚರಂಡಿಗಳು ಹಾನಿಯಾಗಿವೆ. ದುರಸ್ತಿಗೆ 19.19 ಕೋಟಿ ರೂ. ಬೇಕು. ಇದೆಲ್ಲವಕ್ಕೂ ನಾಲಾ ಒತ್ತುವರಿ ಕಾರಣ ಎಂದು ಹೇಳಲಾಗದಿದ್ದರೂ ಬಹುತೇಕ ಕಡೆ ಸರಿಯಾಗಿ ನೀರು ಹರಿದು ಹೋಗಲು ಜಾಗೆ ಇಲ್ಲದ್ದರಿಂದ ಈ ಹಾನಿ ಸಂಭವಿಸಿರುವುದು ಸ್ಪಷ್ಟ.
ನಾಲಾ ಒತ್ತುವರಿ ತೆರವುಗೊಳಿಸಿದರೆ ಇಂತಹ ಹಲವು ಸಮಸ್ಯೆಗಳು ಉದ್ಭವಕ್ಕೆ ತಡೆ ಹಾಕಬಹುದು ಎಂಬುದು ಪ್ರಾಜ್ಞರ ಅಭಿಮತವೂ ಹೌದು. ನಾಲಾ ಒತ್ತುವರಿ ಪರಿಣಾಮ ಪ್ರತಿ ಮಳೆಗಾಲದಲ್ಲೂ ತೊಂದರೆ ಅನುಭವಿಸುವುದಕ್ಕಿಂತ ಮನೆಗಳ ಸ್ಥಳಾಂತರಿಸುವುದು ಜನರ ಹಿತದೃಷ್ಟಿಯಿಂದಲೂ ಒಳ್ಳೆಯದು. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಮನೆಗೆ ನೀರು ನುಗ್ಗಿದ ಪ್ರಕರಣಗಳಲ್ಲಿ ಬಟ್ಟೆ ಕಳೆದುಕೊಂಡರೆ 2,500 ರೂ, ಗೃಹೋಪಯೋಗಿ ವಸ್ತುಗಳು ಹಾನಿಯಾದರೆ 2,500 ಸೇರಿ ಒಟ್ಟು 5,000 ರೂ. ಪರಿಹಾರ ಪಾವತಿಸಲಾಗುತ್ತದೆ. ಆದರೆ ಈ ಮೊತ್ತ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿದೆ. ಹೀಗಾಗಿ ಸುರಕ್ಷಿತ ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ಸಣ್ಣದಾದ ಮನೆಯಲ್ಲಿ ಆದರೂ ನೆಮ್ಮದಿ ಜೀವನ ನಡೆಸಲು ಜನರಿಗೆ ಅನುಕೂಲ ಮಾಡಿಕೊಡಬೇಕಿದೆ. ಇದಕ್ಕೆ ಗುಂಪುಮನೆ ಸೂಕ್ತ ಯೋಜನೆಯಾಗಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅನಿಸಿಕೆ.