
ಯಾದಗಿರಿ: ಈ ಬಾರಿಯ ಪೂರ್ವ ಮುಂಗಾರಿನ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 13.16 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜೊತೆಗೆ ಗುಡುಗು, ಮಿಂಚು ಹಾಗೂ ಬಿರುಗಾಳಿಯಿಂದ ಗಿಡ ಮರಗಳು, ಟಿನ್ ಶೆಡ್ ಮನೆಗಳು ಹಾಗೂ ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿ ಜನರ ಜೀವನಕ್ಕೆ ತೊಂದರೆಯಾಗಿದೆ.

j3tvkannada
ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಮಾವು, ಪಪ್ಪಾಯ, ನಿಂಬೆ, ಸಪೋಟ ಸೇರಿದಂತೆ 6.36 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸುರಪುರ, ಹುಣಸಗಿಯಲ್ಲಿ, ಸಪೋಟ 0.60 ಹೆಕ್ಟೇರ್ ಮಾವು ಬೆಳೆ ನಷ್ಟವಾಗಿದೆ. ಪಪ್ಪಾಯ 3.86 ಹೆಕ್ಟೇರ್, ನಿಂಬೆ 1.10 ಹೆಕ್ಟೇರ್, ಸಪೋಟ 0.60 ಹೆಕ್ಟೇರ್, ಬದನೆ 0.20 ಹೆಕ್ಟೇರ್, ಟೊಮೊಟೊ 0.20 ಹೆಕ್ಟೇರ್, ಈರುಳ್ಳಿ 0.40 ಹೆಕ್ಟೇರ್, ನುಗ್ಗೆ 1.60 ಹೆಕ್ಟೇರ್ ಸೇರಿದಂತೆ 13.16 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ.
ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ, ಶಹಾಪುರ ಹಾಗೂ ಹುನಸಗಿ ಭಾಗದಲ್ಲಿ ಬಿರುಗಾಳಿ ಹಾಗೂ ಮಳೆಗೆ ಮರಗಳು ಮುರಿದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯನ್ನುಂಟು ಮಾಡಿವೆ. ಜೆಸ್ಕಾಂನ ಯಾದಗಿರಿ ಉಪ ವಿಭಾಗದಲ್ಲಿ ವಿದ್ಯುತ್ ಕಂಬಗಳು, 71 ಪರಿವರ್ತಕಗಳು, 2 ಕಿಲೋ ಮೀಟರ್ ವೈರ್ ಹಾಗೂ 12 ಡಬಲ್ ಪೋಲ್ ಸ್ಟ್ರೆಕ್ಚರ್ ಹಾನಿಯಾಗಿದ್ದರೆ, ಸುರಪುರ ಉಪ ವಿಭಾಗದಲ್ಲಿ 334 ವಿದ್ಯುತ್ ಕಂಬಗಳು ಹಾಗೂ 3 ಪರಿವರ್ತಕಗಳು ಹಾನಿಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ 564 ವಿದ್ಯುತ್ ಕಂಬಗಳು, 74 ಪರಿವರ್ತಕಗಳು ಹಾನಿಗೊಳಗಾಗಿವೆ.
ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುತ್ತಿದ್ದು ನೀರಿನ ಹರಿವು ಹೆಚ್ಚಿದೆ. ಕಳೆದ ಮೂರು ವಾರಗಳಿಂದಲೂ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಇದ್ದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನಗರ ಹೊರವಲಯದ ಭೀಮಾ ನದಿ ದಡದಲ್ಲಿ ನೀರು ಮಿತಿ ಮೀರಿ ಹರಿಯತ್ತಿದೆ. ಕಳೆದ ಮೂರು ದಿನಗಳಿಂದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೂ ನೀರಿನ ಹರಿವು ಹೆಚ್ಚಳವಾಗಿದೆ.