
ಕಲಬುರಗಿ: ಅಹ್ಮದಾಬಾದ್ನಲ್ಲಿ ನಡೆದಿರುವ ವಿಮಾನ ದುರಂತಕ್ಕೆ ಎಂಜಿನ್ ಕ್ಷಮತೆಯಿಂದ ನಿರ್ಮಾಣವಾದ ಹೆಚ್ಚಿನ ಭಾರವೇ ಕಾರಣ ಆಗಿರಬಹುದು ಎಂಬ ಶಂಕೆಯನ್ನು ನಿವೃತ್ತ ಪೈಲಟ್ ಕ್ಯಾಪ್ಟನ್ ಯೋಗಾನಂದ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು ಸಾಮಾನ್ಯವಾಗಿ ಫ್ಲೈಟ್ ಲ್ಯಾಂಡ್ ಆಗುವ ವೇಳೆ ಸಮಸ್ಯೆಗಳಾಗುತ್ತವೆ. ಆದರೆ ಅಹ್ಮದಾಬಾದ್ನಲ್ಲಿ ವಿಮಾನ್ ಟೇಕಾಫ್ ಆಗುವ ವೇಳೆ ಅವಘಡ ಸಂಭವಿಸಿದೆ. ಬಹುಶಃ ವಿಮಾನ ಇನ್ನೊಂದು ನಿಮಿಷ ಮೇಲಕ್ಕೆ ಹಾರಿದರೆ ಅಪಾಯ ತಪ್ಪುತ್ತಿತ್ತು ಎಂದು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

j3tvkannada
ದೇಶದಲ್ಲಿ ಸಾಕಷ್ಟು ಹಳೆಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ವಿಮಾನ ಹೊಸದಾಗಿರುವಾಗ ಎಂಜಿನ್ ತಾಳಿಕೊಳ್ಳುವ ಭಾರದ ಕುರಿತು ಡಿಜಿಸಿಎ ವರದಿ ನೀಡುತ್ತದೆ. ಮುಂದಿನ ಹತ್ತಾರು ವರ್ಷ ಇದೇ ವರದಿಯ ಮೇಲೆ ವಿಮಾನ ಹಾರಾಟ ನಡೆಸುತ್ತದೆ. ಆದರೆ ವರ್ಷಗಳು ಕಳೆದಂತೆ ಎಂಜಿನ್ ಕ್ಷಮತೆ ಕಡಿಮೆಯಾಗುತ್ತದೆ. ಕ್ಷಮತೆ ಕಡಿಮೆಯಾದಂತೆ ಮೊದಲಿನ ಸಾಮಾನ್ಯ ಭಾರವು ಕೂಡ ಹೆಚ್ಚಿನ ಭಾರವಾಗುತ್ತದೆ. ಅಂತಹ ವೇಳೆ ವಿಮಾನ ಟೇಕ್ ಆಫ್ ಆಗುವಾಗ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರವೆಂದರೆ ಡಿ.ಜಿ.ಸಿ.ಎ ಹಾಗೂ ಎರ್ಲೈನ್ಸ್ ಕಂಪನಿಗಳು ನಿಯಮಿತವಾಗಿ ಎಂಜಿನ್ ಕ್ಷಮತೆ ತಪಾಸಣೆ ಮಾಡಬೇಕು.
ವಿಮಾನ ಟೇಕ್ಆಫ್ ಆಗುವ ವೇಳೆ ಪ್ರತಿ ಸೆಕೆಂಡ್ ಅತ್ಯಂತ ಮಹತ್ವದ್ದಾಗಿದೆ. ವಿಮಾನ ಮೇಲೇರಲು ಎಷ್ಟು ರನ್ ವೇ ಬಳಸಿಕೊಳ್ಳಬೇಕು ಎಂಬುದು ದಿನದ ಬೇರೆ ಬೇರೆ ಸಮಯದಲ್ಲಿ ಬೇರೆಯಾಗಿರುತ್ತದೆ. ಮಧ್ಯಾಹ್ನದ ವೇಳೆ ಅಹ್ಮದಾಬಾದಿನ ಏರ್ಪೋರ್ಟ್ನಿಂದ ವಿಮಾನ ಟೇಕ್ ಆಫ್ ಆಗಿದೆ. ಗಾಳಿಯ ಡೆನ್ಸಿಟಿ ಮೇಲೆ ವಿಮಾನ ಮೇಲೇರುವ ಸಮಯ ನಿಗದಿ ಮಾಡಲಾಗುತ್ತದೆ. ಹೆಚ್ಚಿನ ಉಷ್ಣಾಂಶ ಇರುವ ಕಾರಣ ಎಂಜಿನ್ ಕ್ಷಮತೆಯಲ್ಲಿ ದೋಷ ಉಂಟಾಗಿ ಘಟನೆ ಸಂಭವಿಸಿರಬಹುದು ಎಂದು ಹೇಳುತ್ತಾರೆ.
ಪೈಲಟ್ ಸಲಹೆಗಳೇನು?
* ಪೈಲಟ್ಗಳು ಲಾಗ್ಬುಕ್ನಲ್ಲಿ ದಾಖಲು ಮಾಡುವ ಅಂಕಿ ಸಂಖ್ಯೆ ನಿರಂತರ ಕಣ್ಣಿಡಲಿ ಹಾಗೂ ಅವುಗಳನ್ನು ಡಿಜಿಸಿಎ ಬಳಸಿಕೊಳ್ಳಲಿ.
* ಕ್ಷಮತೆ ಕಡಿಮೆ ಆಗಿರುವ ವಿಮಾನಗಳನ್ನು ದೇಶೀಯ ಪ್ರಯಾಣಕ್ಕೆ ಬಳಸಿಕೊಳ್ಳಲಿ.
* ದೂರದ ಪ್ರಯಾಣಕ್ಕೆ ಹೊಸ ವಿಮಾನಗಳು ಅಥವಾ ಇಂತಿಷ್ಟು ವರ್ಷದ ವಿಮಾನ ಮಾತ್ರ ಎಂಬ ನಿಯಮ ಬರಲಿ.
* ಎಲ್ಲವನ್ನು ಏರ್ಲೈನ್ಸ್ ಕಂಪನಿಗಳ ಮರ್ಜಿಗೆ ಬಿಡದೆ ಸರಕಾರ ಸಹಭಾಗಿತ್ವದಲ್ಲಿ ಹೊಸ ಸಂಶೋಧನೆ ನಡೆಯಲಿ.
* ಬ್ಲಾಕ್ ಬಾಕ್ಸ್ ಡಿಕೋಡಿಂಗ್ ವ್ಯವಸ್ಥೆ ನಮ್ಮಲ್ಲಿ ಬರಲಿ. ವಿಮಾನ ತಯಾರಿಸುವ ಕಂಪನಿಗಳು ನೀಡುವ ವರದಿ ಮೇಲೆ ಆಧಾರ ಬೇಡ.
ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಿ
ಲಕ್ಷಾಂತರ ರೂಪಾಯಿ ನೀಡಿ ಹಲವರು ವಿಮಾನಯಾನ ಕೈಗೊಳ್ಳುತ್ತಿದ್ದು, ಇವರಿಗೆ ಸುರಕ್ಷತೆಗೆ ಆದ್ಯತೆ ನೀಡಬೇಕಾದದ್ದು ಏರ್ಲೈನ್ಸ್ ಕಂಪನಿಗಳು ಮತ್ತು ಡಿಜಿಸಿಎ ಕೆಲಸ. ಹಣ ನೀಡಿ ಜೀವ ಕಳೆದುಕೊಳ್ಳಲು ವಿಮಾನ ಏರುವಂತಾಗಿದೆ. ಇಂದಿಗೂ ವಿಮಾನದಲ್ಲಿನ ಸಾಮಾನ್ಯರು ಕುಳಿತುಕೊಳ್ಳುವ ಚೇರ್ಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಒಮ್ಮೆ ಅಪಾಯ ಬಂದ ಕೂಡಲೇ ಇಡೀ ಚೇರ್, ಪೂರ್ಣ ಪ್ರಮಾಣದಲ್ಲಿ ಕವರ್ ಆಗುವಂತೆ ಹಾಗೂ ಸುಮಾರು 1 ಗಂಟೆ ಆಮ್ಲಜನಕ ಸಪ್ಲೈ ಆಗುವಂತೆ ಮಾಡಿದರೆ ಹಲವು ಜೀವ ಉಳಿಸಬಹುದು. ತಂತ್ರಜ್ಞಾನ ಬೆಳೆದಿದ್ದು ಹೊಸ ಸಂಶೋಧನೆ ಅಗತ್ಯ ಎನ್ನುತ್ತಾರೆ.