

j3tvkannada
ಯಾದಗಿರಿ: ಅಹಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ದುರಂತದಲ್ಲಿ ಬೆಳಗಾವಿ ಕೆ.ಎಲ್.ಇ ಕಾಲೇಜು ಹಳೇ ವಿದ್ಯಾರ್ಥಿಯಾಗಿದ್ದ ವೈದ್ಯ ಪ್ರತೀಕ್ ಜೋಶಿ ಕುಟುಂಬ ಕೂಡ ಸಾವನ್ನಪ್ಪಿದೆ. ಇತ್ತ ಪ್ರತೀಕ್ ನೆನೆದು ಯಾದಗಿರಿಯ ಸ್ನೇಹಿತ ಡಾ.ಪ್ರಶಾಂತ್ ಬಾಸೂತ್ಕರ್ ಭಾವುಕರಾಗಿದ್ದಾರೆ. ಪ್ರತೀಕ್ ಜೋಶಿ ವೈದ್ಯರಾಗಿ ಇಂಗ್ಲೆಂಡ್ನಲ್ಲೇ ವಾಸವಾಗಿದ್ದರು. ನಿನ್ನೆ ತಮ್ಮ ಕುಟುಂಬವನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಈ ರೀತಿ ಘಟನೆ ನಡೆದಿದೆ. ಪ್ರತೀಕ್ ಮೃತಪಟ್ಟಿರುವ ಸುದ್ದಿ ತಿಳಿದು ತುಂಬಾ ನೋವಾಗಿದೆ. ಬೆಳಗಾವಿಯಲ್ಲಿ MBBS ಸ್ನೇಹಿತರು ಭೇಟಿಯಾಗಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.