
ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಚಂಡಮಾರುತ ಮತ್ತು ಪೂರ್ವ ಮುಂಗಾರು ಮಳೆ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯಾದ್ಯಂತ ಸಾಕಷ್ಟು ಅನಾಹುತಗಳು ಕೂಡ ಆಗಿದ್ದವು. ಉಡುಪಿ ಸಿದ್ದಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್ ಇಲ್ಲದ ಕಾರಣ ಮೆಸ್ಕಾಂ ವಿರುದ್ಧ ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.

j3tvkannada
ಮಣಿಪಾಲ ಭಾಗದಲ್ಲಿ ಬಿದ್ದ ಗಾಳಿ ಮಳೆಯು ಸೃಷ್ಟಿಸಿದ ಅವಾಂತರದ ಪರಿಣಾಮದಿಂದಾಗಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. 22 ದಿನಗಳೇ ಕಳೆದರೂ ಮಣಿಪಾಲ ಸಮೀಪದ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಇನ್ನೂ ಕರೆಂಟ್ ಬಂದಿಲ್ಲ. ದೇಗುಲಕ್ಕೆ ಬರುವ ಭಕ್ತರಿಗೆ, ಪ್ರತಿ ದಿನ ಅರ್ಚನೆ ಪೂಜೆ ಅಭಿಷೇಕ ಮಾಡುವ ಅರ್ಚಕರಿಗೆ ವಿದ್ಯುತ್ ಸಮಸ್ಯೆ ತಲೆದೋರಿದೆ.
ಮಣಿಪಾಲ ಸಂಸ್ಥೆಗೆ ಸಂಬಂಧಿಸಿದ ರೆಸಾರ್ಟ್ ಕತ್ತಲಲ್ಲಿದೆ. ರಸ್ತೆಗೆ ಬಿದ್ದ ವಿದ್ಯುತ್ ಕಂಬ ತಂತಿಗಳು ಇನ್ನು ತೆರವಾಗಿಲ್ಲ. ಮುರಿದು ಬಿದ್ದ ವಿದ್ಯುತ್ ಕಂಬ ತಂತಿಗಳ ನಡುವೆ ದೇವಸ್ಥಾನಕ್ಕೆ ಭಕ್ತರು ಓಡಾಡುತ್ತಿದ್ದಾರೆ. ಗುಡ್ಡ ಕುಸಿತದ ಸಾಧ್ಯತೆಗಳಿದ್ದು, ಈವರೆಗೆ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ.
ಮಣಿಪಾಲ ನಗರದಿಂದ ಕೂಗಳತೆ ದೂರದಲ್ಲಿರುವ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ಸಮಸ್ಯೆ ಆಗಿದೆ. ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕಳೆದ 20 ಕ್ಕೂ ಹೆಚ್ಚು ದಿನದಿಂದ ಕರೆಂಟ್ ಇಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮತ್ತು ಪ್ರತಿ ದಿನ ಪೂಜೆ ಮಾಡುವ ಅರ್ಚಕರಿಗೆ ಇದರಿಂದ ಸಮಸ್ಯೆಯಾಗಿದೆ. ತಂತಿಗಳು ರಸ್ತೆಯಲ್ಲಿ ಬಿದ್ದಿದೆ. ವಿದ್ಯುತ್ ಕಂಬಗಳನ್ನು ತೆರವು ಮಾಡಿಲ್ಲ ಎಂದು ಕ್ಷೇತ್ರದ ಭಕ್ತ ವಾಸುದೇವ ಪರಂಪಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.