
ರಾಮನಗರ: ರೀಲ್ಸ್ ಮಾಡಿಕೊಂಡಿದ್ದ ರಕ್ಷಿತಾಗೆ ಅದರ ಮೂಲಕವೇ ಪ್ರತಾಪನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಅದು ಪ್ರಣಯದಲ್ಲಿ ಮಾರ್ಪಟ್ಟು ಇಬ್ಬರು ಮದುವೆ ಕೂಡ ಆಗಿದ್ದಾರೆ. ಯುವತಿ ಹೇಳುತ್ತಿರೋದೆಲ್ಲ ನಿಜವಾದರೆ ಕೆ.ಎಸ್.ಆರ್.ಟಿ.ಸಿಯಲ್ಲಿ ಡ್ರೈವರೋ ಅಥವಾ ಕಂಡಕ್ಟರೋ ಆಗಿ ಕೆಲಸ ಮಾಡುವ ಭಂಡ ಪ್ರತಾಪ್ನಿಂದ ಈಕೆಗೆ ಭಾರೀ ಅನ್ಯಾಯವಾಗಿದೆ.

j3tvkannada
ಸಮಸ್ಯೆಯೇನೆಂದರೆ ಯುವತಿ ಎಸ್ಸಿ ಸಮುದಾಯಕ್ಕೆ ಸೇರಿದವರು ಮತ್ತು ಪ್ರತಾಪ್ ಒಕ್ಕಲಿಗ ಗೌಡ ಜಾತಿಯವರು. ಪ್ರತಾಪ್ ಅಮ್ಮನಿಗೆ ರಕ್ಷಿತಾ ಬೇಕಿಲ್ಲ, ತಮ್ಮ ಸಮುದಾಯದ ಯುವತಿಯನ್ನು ಮದುವೆಯಾಗು, ಮನೆ ತುಂಬಿಸಿಕೊಳ್ತೀನಿ ಎಂದು ಹೇಳುತ್ತಿದ್ದರು. ಹೀಗಿದ್ದರೂ ಕೂಡಾ, ಪ್ರತಾಪ್ ಒಂದು ವರ್ಷ ಕಾಲ ರಕ್ಷಿತಾಳೊಂದಿಗೆ ಸಂಸಾರ ಮಾಡಿದ್ದಾನೆ. ಆದರೆ ಈಗ ದಿಡೀರ್ ನಾಪತ್ತೆಯಾಗಿದ್ದಾನೆ. ರಕ್ಷಿತಾ ಪ್ರತಿದಿನ ಅವನನ್ನು ಹುಡುಕಿಕೊಂಡು ತಿರಗಾಡುತ್ತಿದ್ದಾರೆ ಮತ್ತು ನ್ಯಾಯ ಕೊಡಿಸಿ ಎಂದು ಹೇಳುತ್ತಿದ್ದಾರೆ.