
ಬಳ್ಳಾರಿ: ತಾಲೂಕಿನ ಭುಜಂಗನಗರ ಹಾಗೂ ನರಸಪುರ ಮಾರ್ಗಮದ್ಯದ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ನಾಗರಾಜ ಎನ್ನುವ ವ್ಯಕ್ತಿ ರಸ್ತೆಯಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದ್ದಾನೆ. ಇಲ್ಲಿ ರಸ್ತೆಯನ್ನ ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ. ಸುತ್ತಮುತ್ತಲಿನ ನೀರೆಲ್ಲಾ ಇಲ್ಲೇ ಬಂದು ನಿಲ್ಲುತ್ತದೆ. ರಸ್ತೆ ಪಕ್ಕದ ಡ್ರೈನೇಜ್ ಸಹಾ ವ್ಯವಸ್ಥೆ ಮಾಡಿಲ್ಲ ತಗ್ಗು ಪ್ರದೇಶ ನಿರ್ಮಾಣ ಮಾಡುವ ಕಾರಣ ಮಳೆ ಬಂತೆಂದರೆ ರಸ್ತೆ ಮಧ್ಯ ನೀರಿನ ಹೊಂಡ ನಿರ್ಮಾಣವಾಗುತ್ತದೆ.

j3tvkannada
ಅಲ್ಲಿಂದ ನೀರು ಹೊರಗೆ ಹೋಗಲು ವ್ಯವಸ್ಥೆ ಕಲ್ಪಿಸಿಲ್ಲ. ಇಲ್ಲಿ ಸಂಚರಿಸುವಾಗ ಹಲವು ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಪಾದಚಾರಿಗಳು ಸಂಚಾರಕ್ಕೆ ವ್ಯಥೆಯ ಉಂಟಾಗಿ ತೊಂದರೆಯಾಗಿದೆ. ಹಲವಾರು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರೆದಿದ್ದು ಕೇಳುವವರೇ ಇಲ್ಲದಂತಾಗಿದೆ. ಕಾರಣ ರಸ್ತೆಯಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಈ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಂಡೂರು ಪಟ್ಟಣವನ್ನೊಳಗೊಂಡು ಯಶವಂತನಗರ, ಭುಜಂಗನಗರ, ಸುಶೀಲಾನಗರ, ಸಿದ್ದಾಪುರ ಜೈಸಿಂಗಪುರ ವೆಂಕಟಗಿರಿ ಕೃಷ್ಣಾನಗರ, ತಾರಾನಗರ ಹೀಗೆ ಹಲವಾರು ಗ್ರಾಮಗಳಲ್ಲಿ ತಡರಾತ್ರಿಯಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಉತ್ತಮ ಮಳೆಯಗಿದೆ. ಸಂಡೂರು ಮಳೆ ಮಾಪನ ಕೇಂದ್ರದ ಪ್ರಕಾರ ಸಂಡೂರಿನ ಹೋಬಳಿಯಲ್ಲಿ 40 ಮಿ.ಮೀಟರ್ ಮಳೆಯಾಗಿದೆ. ಚೋರನೂರು ಹೋಬಳಿಯಲ್ಲಿ ವರುಣ ಕೃಪಾಕಟಾಕ್ಷ ಇಲ್ಲದಂತಾಗಿ ಮಳೆಗೆ ಕೊಂಚ ಹಿನ್ನಡೆಯಾಗಿದ್ದು, ಸಂಡೂರು ಪಟ್ಟಣವನ್ನೊಳಗೊಂಡು ಹಲವಾರು ಗ್ರಾಮೀಣ ಭಾಗದಲ್ಲಿ ಬಿತ್ತನೆ ಕೆಲಸ ಚುರುಕುಡೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.