
ಕೊಡಗು(ವಿರಾಜಪೇಟೆ): ಪಟ್ಟಣದ ಪಂಜರುಪೇಟೆಯ ನಿಸರ್ಗ ಬಡಾವಣೆ ಬಳಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಬಸ್ ತಂಗುದಾಣ ಬೇಕೆಂಬ ಸ್ಥಳೀಯರ ಬೇಡಿಕೆಯಂತೆ ೧೦.೫ ಲಕ್ಷ ರೂ, ಶಾಸಕರ ವಿಶೇಷ ಅನುದಾನದಿಂದ ತಂಗುದಾಣದ ಕಾಮಗಾರಿ ನಡೆಸಲಾಗಿದೆ. ಸಾರ್ವಜನಿಕರು ತಂಗುದಾಣವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಶುಚಿತ್ವವನ್ನು ಕಾಪಾಡಿಕೂಳ್ಳಬೇಕು ಎಂದು ಹೇಳಿದರು.

j3tvkannada
ನಿಸರ್ಗ ಬಡಾವಣೆಯ ನಿವಾಸಿಗಳು ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ, ನಿಸರ್ಗ ಬಡಾವಣೆಯ ನಿವಾಸಿಗಳಾದ ಜಗದೀಶ್, ಬೀನ ಜಗದೀಶ್, ವಕೀಲ ಡಿ.ಸಿ.ಧ್ರುವಕುಮಾರ್, ಉದ್ಯಮಿ ಮನೋಜ್, ಕಾಳಮಂಡ ಜಗತ್, ಜಿಲ್ಲಾ ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷ ಜಾನ್ಸನ್, ನಗರ ಸಮಿತಿ ಕಾರ್ಯದರ್ಶಿ ಎಂ.ಎಂ.ಶಶಿಧರನ್, ಪುರಸಭೆ ಸದಸ್ಯರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.