
ಉತ್ತರಕನ್ನಡ(ಶಿರಸಿ):15 ವರ್ಷಗಳಿಂದ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶಿವಮೊಗ್ಗ ಭದ್ರಾಪುರದ ಮೋಹನ ಮಾದು ಶಿಂಧೆಯನ್ನು ಇಲ್ಲಿನ ನಗರ ಠಾಣೆ ಪೊಲೀಸರು ಚಂದಾಪುರದಲ್ಲಿ ವಶಪಡೆದುಕೊಂಡು ಕೋರ್ಟ್ಗೆ ಹಾಜರುಪಡಿಸಿದ್ದಾರೆ.

j3tvkannada.in
ಇತ್ತೀಚೆಗಂತೂ ಯಾರು ಯಾವ ತಪ್ಪು ಮಾಡಿದರೂ ಪತ್ತೆಯಾಗಿಯೇ ಆಗುತ್ತದೆ. ಅದರಲ್ಲೂ 15 ವರ್ಷಗಳಿಂದ ತಲೆಮರೆಸಿಕೊಂಡಿರುವಾತ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದು ರೋಚಕ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳಲ್ಲಿ ಇದೂ ಒಂದು ನಿದರ್ಶನವಾಗಿದೆ.
ಡಿ ಎಸ್ ಪಿ ಗೀತಾ ಪಾಟೀಲ ಮಾರ್ಗದರ್ಶನ, ಸಿ.ಪಿ.ಐ ಶಶಿಕಾಂತ ವರ್ಮಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ ಐ ನಾಗಪ್ಪ ಬಿ ಸಿಬ್ಬಂದಿ ವಿಶ್ವನಾಥ ಬಂಡಾರಿ, ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಕಟ್ಟಿ ಅವರು ಪಾಲ್ಗೊಂಡಿದ್ದರು.