
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಸುಮಾ ಆಗ್ರೋ ಸೀಡ್ಸ್ ಅಂಗಡಿ ಮುಂಭಾಗ ಜೂನ್ 4 ರಂದು ನಗರದ ಅಂಬೇಡ್ಕರ್ ಕಾಲೋನಿ ನಿವಾಸಿ ಶ್ರೀಕಾಂತ್ ಎಂಬವರನ್ನು ಕೊಲೆ ಮಾಡಲಾಗಿತ್ತು. ಈಗ ಕೊಲೆ ಪ್ರಕರಣ ಬಯಲಿಗೆಳೆದಿರುವ ಚಿಕ್ಕಬಳ್ಳಾಪುರ ನಗರ ಠಾಣೆ ಪೋಲಿಸರು, ದೊಡ್ಡಬಳ್ಳಾಪುರ ಮೂಲದ ನರಸಿಂಹಮೂರ್ತಿ ಅಲಿಯಾಸ್ ಕೆಂಪ ಹಾಗೂ ಅವನ ಪ್ರಿಯತಮೆ ತಿಪ್ಪೇನಹಳ್ಳಿ ನಿವಾಸಿ ಲಕ್ಷ್ಮಿದೇವಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಜ ಏನೆಂಬುದು ತಿಳಿದು ಬಂದಿದೆ. ಶ್ರೀಕಾಂತ್ ಕೊಲೆ ನಡೆದ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮರಾಗಳಿದ್ದು, ಓರ್ವ ಮಹಿಳೆ ಹಾಗೂ ಪುರುಷ ಬಂದು ಹೋಗಿರುವ ದೃಶ್ಯಗಳು ಸೆರೆಯಾಗಿದ್ದವು. ಇದರ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.

j3tvkannada
ಶ್ರೀಕಾಂತ್ ಜೂನ್ 3 ರಂದು ರಾತ್ರಿ, ಆರೋಪಿಗಳು ಮಲಗಿದ್ದ ಜಾಗಕ್ಕೆ ಹೋಗಿದ್ದ. ಅಷ್ಟೇ ಅಲ್ಲದೆ ಲಕ್ಷ್ಮಿದೇವಿಗೆ ಹಣದ ಆಮಿಷವೊಡ್ಡಿ, ತನ್ನ ಜೊತೆ ಮಲಗಲು ಕರೆದಿದ್ದ ಎಂದು ಆರೋಪಿಸಲಾಗಿದೆ. ಆಗ ಆಕೆ ತನ್ನ ಜೊತೆ ಇದ್ದ ಕೆಂಪನನ್ನು ಎಚ್ಚರಗೊಳಿಸಿದ್ದಳು. ಆದರೂ ಮಾತು ಕೇಳದ ಶ್ರೀಕಾಂತ್ ಲಕ್ಷ್ಮಿದೇವಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೆರಳಿದ ಆಕೆಯ ಪ್ರಿಯಕರ, ಶ್ರೀಕಾಂತ್ಗೆ ಕಲ್ಲಿನಿಂದ ಜಜ್ಜಿ ಮರ್ಮಾಂಗಕ್ಕೆ ಒದ್ದು ಅಲ್ಲಿಂದ ಪರಾರಿಯಾಗಿದ್ದ. ಮನೆಯಲ್ಲಿ ಸುಂದರಿಯಾದ ಪತ್ನಿ ಇದ್ದರೂ ಶ್ರೀಕಾಂತ್, ಪತ್ನಿ ಜೊತೆ ಜಗಳ ಮಾಡಿಕೊಂಡು ಬೀದಿಗೆ ಬಂದಿದ್ದು, ಬೀದಿಯಲ್ಲಿ ಕಂಡ ಬೇರೊಬ್ಬ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ. ಅದುವೇ ಆತನನ್ನು ಸಾವಿನ ಮನೆ ಸೇರುವಂತೆ ಮಾಡಿದೆ.