

j3tvkannada
ತುಮಕೂರು: ಇದ್ದೊಬ್ಬನೇ ಮಗನನ್ನು ಕಳೆದುಕೊಂಡು ತುಮಕೂರು ಮೂಲದ ಈ ತಂದೆ ಅನುಭವಿಸುತ್ತಿರುವ ದುಃಖ, ನೋವು, ಸಂಕಟ, ಯಾತನೆ, ಹತಾಷೆ ನೋಡಲಾಗದು, ಹೇಳಲಾಗದು.
ನಿನ್ನೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತಕ್ಕೆ ಬಲಿಯಾದ 11 ಜನರಲ್ಲಿ ಇವರ 19 ವರ್ಷದ ಮನೋಜ್ ಸಹ ಒಬ್ಬ. ನಗರದ ಕಾಲೇಜೊಂದರಲ್ಲಿ ಬಿ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಮನೋಜ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.
ನತದೃಷ್ಟ ತಂದೆ ಮಗನ ಕುರಿತು ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದರು. ಆದರೆ ಆರ್ ಸಿ ಬಿ ವಿಜಯೋತ್ಸವಕ್ಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದು ದುರ್ದೈವ. ಬಾಳಿ ಬದುಕಬೇಕಿದ್ದ ಮಗ, ಸಾವನ್ನಪ್ಪಿದ್ದಾನೆ. ಯಲಹಂಕ ಓಲ್ಡ್ ಟೌನ್ನಲ್ಲಿ ವಾಸವಾಗಿರುವ ಈ ಕುಟುಂಬ ತಮ್ಮ ಹುಟ್ಟೂರು ಕುಣಿಗಲ್ ತಾಲ್ಲೂಕಿನ ನಾಗಸಂದ್ರದಲ್ಲಿ ಮಗನ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.