
ಉಡುಪಿ: ಕೊಂಕಣ ರೈಲ್ವೆಯು ಮಾನ್ಸೂನ್ ಎದುರಿಸಲು ಪೂರ್ವ ಸಿದ್ಧತೆಯೊಂದಿಗೆ ಪ್ರಯಾಣಿಕರು ಹಾಗೂ ರೈಲುಗಳ ಸುರಕ್ಷಿತ ಸಂಚಾರ ನಿಟ್ಟಿನಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ ಎಂದು ಕೊಂಕಣ ರೈಲ್ವೆ ಚೇರ್ಮೆನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ತಿಳಿಸಿದ್ದಾರೆ. ನವಿ ಮುಂಬಯಿಯ ಬೇಲಾಪುರದಲ್ಲಿರುವ ಕೊಂಕಣ ರೈಲ್ವೆ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ. 15ರಿಂದ ಅ.20ರ ತನಕ ಕೊಂಕಣ ರೈಲ್ವೆ ಮಾನ್ಸೂನ್ ವೇಳಾಪಟ್ಟಿ ಜಾರಿಯಲ್ಲಿರಲಿದ್ದು ರೈಲು ಹಳಿ ಬದಿ ಮಳೆ ನೀರು ಹರಿವ ಚರಂಡಿ ಸ್ವಚ್ಛಗೊಳಿಸಿದ್ದು ಗುಡ್ಡಗಳಿಂದ ಕಲ್ಲುಗಳು ಹಳಿಗೆ ಬೀಳದಂತೆ, ಭೂ ಕುಸಿತವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

j3tvkannada
ತರಬೇತಿ ಪಡೆದ 636 ಮಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಇಡಲು ನಿಯೋಜಿಸಲಾಗಿದೆ. ರೈಲು ನಿರ್ವಹಣಾ ವಾಹನವು ವೀರ್, ಚಿಪ್ಳೂಣ್, ರತ್ನಗಿರಿ, ರಾಜಾಪುರ ರೋಡ್, ಕುಡಾಲ್, ವೆರ್ನಾ, ಕಾರವಾರ, ಭಟ್ಕಳ, ಉಡುಪಿಯಿಂದ ಕಾರ್ಯನಿರ್ವಹಿಸಲಿವೆ. ತುರ್ತು ಸ್ಪಂದನೆ ನಿಟ್ಟಿನಲ್ಲಿಎಕ್ಸವೇಟರ್ ಸಹಿತ ವ್ಯಾಗನ್ಗಳನ್ನು ಚಿಪ್ಳೂಣ್, ರತ್ನಗಿರಿ, ಕಂಕವಲಿ, ವೆರ್ನಾದಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ. ಟವರ್ ವ್ಯಾಗನ್ಗಳು ಮನಗಾಂವ್, ಚಿಪ್ಲೂಣ್, ರತ್ನಗಿರಿ, ಕಂಕವಲಿ, ಕರ್ಮಲಿ, ಕಾರವಾರ, ಉಡುಪಿಯಲ್ಲಿ ತುರ್ತು ಸ್ಪಂದನೆಗೆ ಲಭ್ಯವಾಗಲಿವೆ.
ತೀವ್ರ ಮಳೆ ಸಂದರ್ಭ ರೈಲುಗಳು ಗಂಟೆಗೆ 40ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಅಪಘಾತ ಪರಿಹಾರ ವೈದ್ಯಕೀಯ ವಾಹನಗಳು ಆಪರೇಶನ್ ಥಿಯೇಟರ್ ಮತ್ತು ತುರ್ತು ವೈದ್ಯಕೀಯ ನೆರವಿನ ಸಹಿತವಾಗಿ ರತ್ನಗಿರಿ, ವೆರ್ನಾದಿಂದ ಕಾರ್ಯ ನಿರ್ವಹಿಸಲಿವೆ. ಅಪಘಾತ ಪರಿಹಾರ ರೈಲು ವೆರ್ನಾದಲ್ಲಿ ಇರಲಿದ್ದು 100ಮಿಮೀ. ಗಿಂತ ಹೆಚ್ಚು ಮಳೆ ಬಿದ್ದ ಪ್ರದೇಶದಲ್ಲಿ ರೈಲು ಸಂಚಾರ ರದ್ದು ಪಡಿಸಲಾಗುವುದು. ಮಳೆ ಮಾಪಕಗಳನ್ನು ಮನಗಾಂವ್, ಚಿಪ್ಳೂಣ್, ರತ್ನಗಿರಿ, ವಿಲವಡೆ, ಕಂಕವಲಿ, ಮಡಗಾಂವ್, ಕಾರವಾರ, ಭಟ್ಕಳ, ಉಡುಪಿಯಲ್ಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೆರೆ ಎಚ್ಚರಿಕೆ ನೀಡುವ ವ್ಯವಸ್ಥೆಯು ಕಾಳಿ, ಸಾವಿತ್ರಿ, ವಶಿಷ್ಟಿ ನದಿ ವ್ಯಾಪ್ತಿಯ ಸ್ಟೇಶನ್ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಗಾಳಿ ವೇಗವನ್ನು ಪನ್ವಲ್ ವಯಡಕ್ಟ್, ಮಾಂಡೋವಿ ಬ್ರಿಜ್, ಝುವಾರಿ ಬ್ರಿಜ್, ಶರಾವತಿ ಬ್ರಿಜ್ನಲ್ಲಿಅಳೆಯಲಾಗುವುದು. ಬೇಲಾಪುರ, ರತ್ನಗಿರಿ, ಮಡಗಾಂವ್ನಲಿ 24/7 ನಿಯಂತ್ರಣ ಕೊಠಡಿ ಹಾಗೂ ವೈದ್ಯಕೀಯ ತಂಡವು ಚಿಪ್ಳೂಣ್, ವೆರ್ನಾ, ಮಡಗಾಂವ್, ಕಾರವಾರ, ಉಡುಪಿ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನ ಮಾಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸೆ. 16 ರಂದು ಉದ್ಘಾಟನೆಗೊಂಡ ಪುಣೆ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಗ್ಗೆ ಉಲ್ಲೇಖಿಸಿದ ಸಚಿವರು, ಆ ರೈಲು ಬೆಳಗಾವಿ ಮೂಲಕ ಬರುತ್ತಿರುವುದರಿಂದ ಬೆಳಗಾವಿಯಲ್ಲಿ ಆ ರೈಲಿಗೆ ಸ್ವಾಗತ ನೀಡಿದ್ದಾಗಿ ಹೇಳಿದರು.