
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ (Road Work) ನಡೆಯುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಉಂಟಾಗಲಿದೆ. ಹಾಗಾದರೆ ಯಾವ ಯಾವ ಗ್ರಾಮಗಳಲ್ಲಿ ಕರೆಂಟ್ ಇರಲ್ಲ ಗೊತ್ತಾ?

j3tvkannada
ಕಾಫಿನಾಡು ಚಿಕ್ಕಮಗಳೂರು ಮಳೆಗಾಲ ಶುರು ಅಯ್ತು ಅಂದರೆ ವಿದ್ಯುತ್ ಸಮಸ್ಯೆ ತಲೆದೂಗಲಿದೆ. ಅಲ್ಲದೆ ಅಲ್ಲಲ್ಲಿ ಮರಗಳು ಬೀಳುವುದು ಲೈಟ್ ಕಂಬಗಳು ಬೀಳುವುದು ಇವುಗಳ ಪ್ರಮಾಣ ಹೆಚ್ಚಾಗುತ್ತಲೇ ಇರುತ್ತದೆ. ಆದರೆ ಬೇಸಿಗೆಯಲ್ಲಿಯೂ ಕೂಡ ಕರೆಂಟ್ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ಮೆಸ್ಕಾಂ ನಲ್ಲಿ ಆಗಾಗ, ಫಿಡರ್ಗಳ ಸಮಸ್ಯೆಯು ಕೂಡ ಹೆಚ್ಚಿರುತ್ತದೆ. ಆದರ ಜೊತಗೆ ಈ ರಸ್ತೆ ಅಗಲೀಕರಣ, ಮರಗಳನ್ನು ಕಟ್ ಮಾಡುವುದು ಹೀಗೆ ಇನ್ನೂ ಹತ್ತು ಹಲವು ಸಮಸ್ಯೆಗಳು ಇರುತ್ತದೆ.
ಅದೇ ರೀತಿಯಾಗಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ದಿನಾಂಕ ಮೇ 17 ರ ಶನಿವಾರ ಸಂಪೂರ್ಣವಾಗಿ ವಿದ್ಯುತ್ ನಿಲುಗಡೆ ಆಗಲಿದೆ. ತಾಲೂಕಿನ ತರೀಕೆರೆ ಪಟ್ಟಣ ರಸ್ತೆಯ ಅಗಲೀಕರಣ ಕಾಮಗಾರಿ ನೆಡೆಯುತ್ತಿರುವುದರಿಂದ ತರೀಕೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮವ ಎಲ್ಲಾ ಫಿಡರ್ ಗಳಲ್ಲಿ ವಿದ್ಯುತ್ ಪೂರೈಕೆ ನಿಲುಗಡೆ ಆಗಲಿದೆ. ಹೀಗಾಗಿ ತಾಲೂಕಿನ ತರೀಕೆರೆ ಪಟ್ಟಣ, ತರೀಕೆರೆ ನೀರು ಪೂರೈಕೆ ಘಟಕ, ಹಾದಿಕೆರೆ, ಪಿರುಮೇನಹಳ್ಳಿ, ಬೆಲ್ಲನಹಳ್ಳಿ, ಕಸಬಾ, ವ್ಯಾಪ್ತಿಯಲ್ಲಿ ನಾಳೆ ವಿದ್ಯುತ್ ಪೂರೈಕೆ ನಿಲುಗಡೆ ಆಗಲಿದೆ.