
ಕಲಬುರಗಿ: ತವರು ಮನೆಯಿಂದ ಹಣ, ಬಂಗಾರ ಮತ್ತು ಆಸ್ತಿ ತರುವಂತೆ ಗಂಡನ ಮನೆಯವರು ಕಿರುಕುಳ ಮನನೊಂದು ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಸರಟಗಿ ರಸ್ತೆಯ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. ಯೋಗಿತಾ ಶಿವಾನಂದ ಹಲಬುರಗಿ (27) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.

j3tvkannada
ಗಂಡ ಶಿವಾನಂದ, ಮೈದುನ ಆನಂದ, ಅತ್ತೆ ಅನುಸೂಯಾ, ಮಾವ ರವೀಂದ್ರ ಮತ್ತು ನಾದ್ನಿ ಸುರೇಖಾ ಅವರು ತವರು ಮನೆಯಿಂದ ಹಣ, ಬಂಗಾರ ಮತ್ತು ಆಸ್ತಿ ತರುವಂತೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ನೊಂದು ತಮ್ಮ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಕಾಂತಾ ಈರಣ್ಣಾ ಗಾವಡೆ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.