
ಮಂಡ್ಯ: ಅದೊಂದು ಕುಗ್ರಾಮ. ಆ ಗ್ರಾಮದ ಅದೊಂದು ರಸ್ತೆ ದುರಸ್ತಿ ಆಗ್ಬೇಕು ಅನ್ನೋದು ಆ ಗ್ರಾಮಸ್ಥರ ಹಲವು ವರ್ಷದ ಬೇಡಿಕೆ ಆಗಿತ್ತು. ಕೊನೆಗೂ ಆ ಕ್ಷೇತ್ರದ ಎಂ.ಎಲ್.ಎ 75 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಈ ವಿಚಾರ ತಿಳಿದ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ತಳಿರು ತೋರಣ ಕಟ್ಟಿ ಸಂಭ್ರಮಿಸಿ, ಹಬ್ಬ ಆಚರಿಸಿದ್ದಾರೆ. ಇಂತಾದ್ದೊಂದು ಪ್ರಸಂಗ ನಡೆದಿರೋದು ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅರಳಕುಪ್ಪೆ ಗ್ರಾಮದಲ್ಲಿ.

j3tvkannada
ಬರೀ 300-350 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿತ್ತು. ಈ ಗ್ರಾಮಕ್ಕೆ ಇದ್ದ ಸಂಪರ್ಕ ರಸ್ತೆ ಹಲವು ವರ್ಷಗಳಿಂದ ಗುಂಡಿ ಬಿದ್ದು ರಸ್ತೆಯಲ್ಲಿ ತಿರುಗಾಡೋದು ಬಲು ದುಸ್ತರವಾಗಿತ್ತು. ಹೀಗಾಗಿ ಹಲವು ವರ್ಷಗಳಿಂದ ಈ ಗ್ರಾಮದ ಜನರು ತಮ್ಮ ಗ್ರಾಮದ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿದ್ರು. ಇದನ್ನರಿತ ಕೆ.ಆರ್.ಪೇಟೆ ಎಂ.ಎಲ್.ಎ ಹೆಚ್.ಟಿ ಮಂಜು ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.