
ಬೆಂಗಳೂರು ಗ್ರಾಮಾಂತರ: ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗುರುಪ್ರಸಾದ್ ಹಾಗೂ ಎಂಟು ಸಿಬ್ಬಂದಿಯೊಂದಿಗೆ ತನ್ನ ಮತ್ತು ತನ್ನ ಮಗನ ಮೇಲೆ ಅತ್ತಿಬೆಲೆ ಟೋಲ್ ಬಳಿ ಹಲ್ಲೆ ನಡೆಸಿದ್ದಾರೆ ಎಂದು ಅತ್ತಿಬೆಲೆ ಪೊಲೀಸ್ ಠಾಣೆ ಮುಖ್ಯ ಪೊಲೀಸ್ ಪೇದೆ ಅಪ್ರೋಜ್ ಖಾನ್ ಠಾಣೆಗೆ ದೂರು ನೀಡಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿ ಐದು ದಿನವಾದರೂ ಇದುವರೆಗೂ ಎಫ್.ಐ.ಆರ್ ದಾಖಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಏ.25ರಂದು ಅತ್ತಿಬೆಲೆ ಟೋಲ್ ಬಳಿ ಗೋವಿಂದರಾಜನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಗುರುಪ್ರಸಾದ್ ಮತ್ತು ಎಂಟು ಸಿಬ್ಬಂದಿ ಎರಡು ಕಾರಿನಲ್ಲಿ ಬಂದು ಅತ್ತಿಬೆಲೆ ಟೋಲ್ ಬಳಿ ತಮ್ಮ 15 ವರ್ಷದ ಮಗನಿಗೆ ವಾಹನ ದಾಖಲೆ ಪರಿಶೀಲಿಸಲು ಕರೆದಿದ್ದಾರೆ. ನನ್ನ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿದ್ದಾರೆ ಎಂದು ಮಗ ತಿಳಿಸಿದ್ದಾನೆ.

j3tvkannada
ಪೊಲೀಸ್ ಸಿಬ್ಬಂದಿ ತಮ್ಮ ಮಗನ ಹಲ್ಲೆ ಮೇಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆ ನಡೆದ ಸಂದರ್ಭದಲ್ಲಿ ಅತ್ತಿಬೆಲೆ ಸಹರದ್ದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು ಸ್ಥಳಕ್ಕೆ ತೆರಳಿ ಪರಿಚಯ ಹೇಳಿಕೊಂಡೆ. ಕಾರಿನಲ್ಲಿ ಇಬ್ಬರನ್ನು ಕೂರಿಸಿ ಕತ್ತಿನಪಟ್ಟಿ ಹಿಡಿದು ಸಾರ್ವಜನಿಕರ ಎದುರಿನಲ್ಲಿಯೇ ಹಲ್ಲೆ ನಡೆಸಿದರು ಎಂದು ಅಪ್ರೋಜ್ ಖಾನ್ ಆರೋಪಿಸಿದ್ದಾರೆ. ಅತ್ತಿಬೆಲೆ ಠಾಣೆಗೆ ಮಾಹಿತಿ ನೀಡಿದ್ದರಿಂದ ಅತ್ತಿಬೆಲೆ ಪೊಲೀಸರು ಕಾರನ್ನು ತಡೆದು ಠಾಣೆಗೆ ಕರೆದು ತಂದರು. ಟೋಲ್ ಬಳಿ ಅನುಚಿತವಾಗಿ ವರ್ತಿಸಿದ ಮತ್ತು ಸಾರ್ವಜನಿಕರ ಎದುರಿನಲ್ಲಿಯೇ ಹಲ್ಲೆ ನಡೆಸಿದ ಗೋವಿಂದರಾಜನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುರುಪ್ರಸಾದ್, ಹನುಮಗೌಡ ಪಾಟೀಲ, ಅರ್ಜುನ್ ಕಂಬಾಳೆ, ಪ್ರಸನ್ನ, ಸುರೇಶ್ ಸೇರಿದಂತೆ ಬಂಭತ್ತು ಮಂದಿಯ ಮೇಲೆ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.