
ಹಾವೇರಿ: ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಮನೆಗೆ ತೆರಳಿ ಶಾಸಕ ಯು.ಬಿ. ಬಣಕಾರ ಸನ್ಮಾನಿಸಿದರು.

j3tvkannada
ಕಲಾ ವಿಭಾಗದಲ್ಲಿ ಮೇದೂರು ಗ್ರಾಮದ ಗಜಾನನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಂದಿನಿ ಖಂಡೇಬಾಗೂರು, ವಿಜ್ಞಾನ ವಿಭಾಗದಲ್ಲಿ ರಟ್ಟಿಹಳ್ಳಿ ಸರ್ಕಾರಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಸಂಗೀತಾ ಮೂಲಿಮನಿ, ವಾಣಿಜ್ಯ ವಿಭಾಗದಲ್ಲಿ ರಟ್ಟಿಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ವಿದ್ಯಾರ್ಥಿನಿ ವನಿತಾ ಕೆಂಚರೆಡ್ಡಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಶಾಸಕರು ಸನ್ಮಾನಿಸಿ, ಶುಭ ಹಾರೈಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಸರ್ಕಾರಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಗುಡ್ಡಾಚಾರಿ ಕಮ್ಮಾರ, ಮುಖಂಡರಾದ ಪಿ.ಡಿ. ಬಸನಗೌಡ್ರು, ವಸಂತ ದ್ಯಾವಕ್ಕಳವರ, ಮಹೇಶ ಗುಬ್ಬಿ, ರವೀಂದ್ರ ಮುದಿಯಪ್ಪನವರ, ತಿರಕಪ್ಪಕರಡೇರ, ರಾಮಚಂದ್ರಪ್ಪ ತಳವಾರ, ನಿಂಗರಾಜ ಕರಡೇರ, ಹಾಗೂ ಗ್ರಾಮಸ್ಥರು ಇದ್ದರು.