ಮಂಡ್ಯ: ಜಿಲ್ಲೆಯ ಕೊತ್ತತ್ತಿ ಗ್ರಾಮದ ಸುಖೇಂದ್ರ ಹಾಗೂ ಶಿವಬಸಪ್ಪರವರ 2 ಎಕರೆ ಜಮೀನಿನಲ್ಲಿ ಭತ್ತ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ರೈತರಿಗೆ ಉತ್ತೇಜನ ನೀಡಿ ಯುವಕರನ್ನ ಕೃಷಿ ಕೆಲಸದತ್ತ ಗಮನ ಕೊಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ತಾವೇ ಗದ್ದೆಗಿಳಿದು ಭತ್ತ ನಾಟಿಯನ್ನು ಬಿ.ವೈ. ವಿಜಯೇಂದ್ರ ಅವರು ಮಾಡಿದ್ದಾರೆ.

ಮಂಡ್ಯಕ್ಕೆ ಆಗಮಿಸಿದ ವಿಜಯೇಂದ್ರಗೆ ಅದ್ದೂರಿಯ ಸ್ವಾಗತವನ್ನು ಕೋರಲಾಗಿದೆ. ಕ್ರೇನ್ ಮೂಲಕ ಬೃಹತ್ ಕಬ್ಬಿನ ಹಾರವನ್ನು ಹಾಕಿ ಸ್ವಾಗತ ಕೋರಲಾಗಿದೆ. ಕ್ಯಾತುಂಗೆರೆಯ ವೀರಾಂಜನೇಯ ದೇವಾಲಯದ ಬಳಿಯಿಂದ ಕೊತ್ತತ್ತಿವರೆಗೆ ಮೆರವಣಿಗೆ ಸಾಗಿದೆ. ಈ ವೇಳೆ ಸ್ವತಃ ಟ್ರಾಕ್ಟರ್ ಚಲಾಯಿಸಿ ವಿಜಯೇಂದ್ರ ಅವರು ಸಂಭ್ರಮಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಭತ್ತ ನಾಟಿಯ ಬಳಿಕ ರೈತರೊಂದಿಗೆ ಸಂವಾದವನ್ನು ನಡೆಸಲಾಯಿತು. ನಂತರ ರೈತರ ಜೊತೆಯಲ್ಲೇ ಕುಳಿತು ಬಿ.ವೈ ವಿಜಯೇಂದ್ರ ಅವರು ಊಟವನ್ನು ಸವಿದು ಸಂಭ್ರಮ ಪಟ್ಟರು. ಈ ವೇಳೆ ಹಲವಾರು ಸ್ಥಳೀಯ ಬಜೆಪಿ ಮುಖಂಡರು ಹಾಜರಿದ್ದರು.