
ಬಾಗಲಕೋಟೆ : ‘ಮನುಷ್ಯ ದುಷ್ಟರ ಸಂಗ ಮಾಡಿ ದುಷ್ಕರ್ಮಿಯಾಗದೇ, ಸಜ್ಜನರ ಸಂಗ ಮಾಡಿ ಸತ್ಕರ್ಮಗಳಿಂದ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದು ಅಧ್ಯಾತ್ಮ ಚಿಂತಕ ಪ್ರದೀಪ ಗುರೂಜಿ ಹೇಳಿದರು. ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಶನಿವಾರ ಸ್ಥಳೀಯ ಹೇಮ ವೇಮನ ಸದ್ಯೋಧನ ಪೀಠ ನೀಲಪ್ಪ ಬಾಳಕ್ಕನವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ 178ನೇ ಮಾಸಿಕ ತತ್ವ ಚಿಂತನ ಕಾರ್ಯಕ್ರಮದಲ್ಲಿ ವೇಮನರ ವಚನ ಕುರಿತು ಸದ್ಯೋಧನೆ ನೀಡಿದರು. ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಶನಿವಾರ ಸ್ಥಳೀಯ ಹೇಮ ವೇಮನ ಸದ್ಯೋಧನ ಪೀಠ ನೀಲಪ್ಪ ಬಾಳಕ್ಕನವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ 178ನೇ ಮಾಸಿಕ ತತ್ವ ಚಿಂತನ ಕಾರ್ಯಕ್ರಮದಲ್ಲಿ ವೇಮನರ ವಚನ ಕುರಿತು ಸದ್ಯೋಧನೆ ನೀಡಿದರು. ‘ಮಹಾನುಭಾವರು, ಶರಣರು, ಸಂತರು, ಯೋಗಿಗಳು ತಮ್ಮ ಅಂತರಂಗದ ಚಕ್ಷುವಿನಿಂದ ಪರಮಾತ್ಮನನ್ನು ಕಂಡವರು. ಹಾಗೆಯೇ ಮನುಷ್ಯ ತನ್ನ ಮನಸ್ಸನ್ನು ಸಚ್ಛವಾಗಿರಿಸಿಕೊಂಡು ನೀತಿವಂತನಾಗಿ ಬಾಳಿ ಪರೋಪಕಾರದ ಕಾರ್ಯ ಗೈದು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದರು.

ನಿವೃತ್ತ ಶಿಕ್ಷಕ ಡಿ.ಪಿ.ಅಮಲಝರಿ ಮಾತನಾಡಿ, ‘ಬದುಕಿನ ಅರ್ಥ ತಿಳಿದುಕೊಂಡವನಲ್ಲಿ ನೀತಿವಂತಿಕೆ ಇರುತ್ತದೆ. ಅ ದಿಸೆಯಲ್ಲಿ ಮನುಷ್ಯ ಸತ್ಸಂಗ, ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತನಾಗಬೇಕು’ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಂಜಯ ನಡುವಿನಮನಿ, ‘ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದು ಮುಖ್ಯವಲ್ಲ, ಯಾವ ರೀತಿ ಬದುಕಿದ ಅನ್ನುವುದು ಮುಖ್ಯ. ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಬದುಕು, ಅವರು ನೀಡಿದ ಸಂದೇಶಗಳು ಎಲ್ಲರ ಬಾಳಿಗೂ ಬೆಳಕಾಗಿವೆ’ ಎಂದು ಹೇಳಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಕೇರಿ, ಶಂಕರ ಯಡಹಳ್ಳಿ, ಹನಮಂತ ಬಾಳಕ್ಕನವರ, ಆರ್.ಎಚ್.ಕುಲಕರ್ಣಿ, ರವಿ ಬಾಳಕ್ಕನವರ, ಬಸವರಾಜ ರಡೇರ, ಸದ್ಯೋಧನ ಪೀಠದ ಟಿ.ಎಚ್.ಸನ್ನಪ್ಪನವರ, ಮಾಲತೇಶ ಅಮಾತೆಪ್ಪನವರ ಇದ್ದರು. ಹೇಮರಡ್ಡಿ ಮಲ್ಲಮ್ಮ ಭಜನಾ ಸಂಘದವರು ವೇಮನ ವಚನ ಪಠಣ ಮಾಡಿದರು.