
ಕೋಲಾರ: ಬೆಮೆಲ್ ಉಪಕರಣಗಳ ತಯಾರಿಕೆಯ ಸಂಬಂಧಿಸಿದಂತೆ ಮೂರು ಪ್ರಮುಖ ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗಣಿಗಾರಿಕೆ ಮತ್ತು ನಿರ್ಮಾಣ, ರಕ್ಷಣಾ ಮತ್ತು ಬಾಹ್ಯಾಕಾಶ ರೈಲು ಮತ್ತು ಮೆಟ್ರೋ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಬೆಮೆಲ್ನ ಯಾವುದೇ ಘಟಕವನ್ನೂ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವುದಿಲ್ಲ. ಬೆಮೆಲ್ ಕಾರ್ಖಾನೆಯ ಹೆಚ್ಚಿನ ಅಭಿವೃದ್ಧಿಗೆ 100 ಎಕರೆ ಭೂಮಿ ನೀಡುವಂತೆ ರಾಜ್ಯ ಸರಕಾರಕ್ಕೆ ಬೆಮೆಲ್ ಅಧಿಕಾರಿಗಳು ಅಗಸ್ಟ್ 2024ರಲ್ಲಿ ಪತ್ರವನ್ನು ಬರೆದಿರುವುದಾಗಿ ಸಂಸದ ಮಲ್ಲೇಶ್ ಬಾಬು ತಿಳಿಸಿದರು. ಲೋಕೋಪಯೋಗಿ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬೆಮೆಲ್ ಸಂಸ್ಥೆ ಲಾಭದಾಯಕವಾಗಿ ನಡೆಯುತ್ತಿದೆ.

j3tvkannada
ಗಣಿಗಾರಿಕೆ, ನಿರ್ಮಾಣ, ವಿದ್ಯುತ್, ನೀರಾವರಿ, ರಸಗೊಬ್ಬರ, ಸಿಮೆಂಟ್, ಉಕ್ಕು ಮತ್ತು ರೈಲು ವಲಯಗಳ ಅಗತ್ಯಗಳನ್ನು ಪೂರೈಸಲು ಬೆಮೆಲ್ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಮಣ್ಣು ತೆಗೆಯುವ ಉಪಕರಗಳಲ್ಲಿ ಬುಲ್ಡೋಜರ್ಗಳು, ಡಂಪ್ಟ್ರಕ್ಗಳು, ಹೈಡ್ರಾಲಿಕ್ ಅಗೆಯುವ ಯಂತ್ರಗಳು, ಚಕ್ರ ಲೋಡರ್ಗಳು, ಹಗ್ಗ ಸುಲಿಕೆಗಳು, ವಾಕಿಂಗ್ ಡ್ರ್ಯಾಗ್ ಲೈನ್ಗಳು, ಮೋಟಾರ್ ಗ್ರೇಡರ್ಗಳು ಮತ್ತು ಸ್ಕ್ರಪರ್ಗಳನ್ನು ತಯಾರಿಸುತ್ತಿದೆ. ಬೆಮೆಲ್ ಇತ್ತೀಚೆಗೆ ರಸ್ತೆ ಹೆಡರ್ಗಳು ಮತ್ತು ಸ್ಲೆತ್ರೖಡ್ ಡಿಸ್ಟಾಜ್ರ್ ಲೋಡರ್ಗಳನ್ನು ಪರಿಚಯಿಸಿದೆ. ರೈಲ್ವೆ ಉತ್ಪನ್ನಗಳಲ್ಲಿಸಮಗ್ರ ರೈಲ್ ಕೋಚ್ಗಳು, ಎಲೆಕ್ಟ್ರಿಕ್ ಮಲ್ಪಿಪಲ್ ಯೂನಿಟ್ಗಳು, ರೈಲ್ ಬಸ್ಗಳು, ಟ್ರ್ಯಾಕ್ -ಲೇಯಿಂಗ್ ಉಪಕರಣಗಳು ಮತ್ತು ಓವರ್ಹೆಡ್ ಉಪಕರಣಗಳ ತಪಾಸಣೆ ಕಾರುಗಳು ಸೇರಿವೆ.
ಬೆಮೆಲ್ ಸಾರಿಗೆ ವಲಯಕ್ಕಾಗಿ ಹೆವಿಡ್ಯೂಟಿ ಟ್ರಕ್ಗಳು ಮತ್ತು ಟ್ರೇಲರ್ಗಳು ಮತ್ತು ಹೈಡ್ರಾಲಿಕ್ ಸಮುಚ್ಚಯಗಳನ್ನು ತಯಾರಿಸಲಾಗುತ್ತಿದೆ. ಪ್ರತಿ ವರ್ಷ ಲಾಭದಾಯಕವಾಗಿ ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಬೆಮೆಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಬುಲೆಟ್ ಟ್ರೈನ್ನ ಕೋಚ್ಗಳು ಮತ್ತು ಬಿಡಿ ಭಾಗಗಳನ್ನು ಮಧ್ಯಪ್ರದೇಶದಲ್ಲಿ ತಯಾರು ಮಾಡಲು ಹೊಸ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಕೆ.ಜಿ.ಎಫ್ನಲ್ಲಿ ಬುಲೆಟ್ ಟ್ರೈನ್ ಬಿಡಿಭಾಗಗಳ ತಯಾರಿಕೆಗೆ 100 ಎಕರೆ ಭೂಮಿಯನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಪತ್ರವನ್ನು ಬರೆಯಲಾಗಿದ್ದು, ಭೂಮಿ ನೀಡಿದರೆ ಕೆಜಿಎಫ್ನಲ್ಲಿ ಕೂಡ ಒಂದು ಘಟಕವನ್ನು ಪ್ರಾರಂಭಿಸಲಾಗುತ್ತದೆ ಎಂದರು.

j3tvkannada
ಬೆಮೆಲ್ನ ಗುತ್ತಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಕಾಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕಾರ್ಮಿಕರ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿರುವುದಾಗಿ ತಿಳಿಸಿದರು. ಚಿನ್ನದ ಗಣಿಗಳ ಕಾರ್ಮಿಕ ಮುಖಂಡರು ನ್ಯಾಯಾಲಯಗಳಲ್ಲಿ ಹೊಡಿರುವ ವ್ಯಾಜ್ಯಗಳನ್ನು ಹಿಂಪಡೆದು ಬಂದರೆ, ಕಾರ್ಮಿಕರಿಗೆ ನೀಡಬೇಕಾಗಿರುವ 52 ಕೋಟಿ ಗ್ರಾಚ್ಯುಟಿ ಹಣ ಹಾಗೂ ಮನೆಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಂಸದರು ತಿಳಿಸಿದರು. ಸ್ಥಳೀಯ ಶಾಸಕರು ಅಥವಾ ಸಂಸದರು ಯಾರೇ ಆಗಲಿ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣಗಳನ್ನು ಹಿಂಪಡೆದಾಗ ಮಾತ್ರ ನಿವೃತ್ತ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾದ್ಯವಾಗಲಿದೆ ಎಂದರು.

j3tvkannada
2001ರಲ್ಲಿ ಚಿನ್ನದ ಗಣಿಗಳನ್ನು ಮುಚ್ಚಿದ ಸಂದರ್ಭದಲ್ಲಿ ಕಾರ್ಮಿಕರು ಸಹಿ ಮಾಡಿದ್ದು, ಒಬ್ಬ ಕಾರ್ಮಿಕರಿಗೆ ಒಂದು ಮನೆ ಎಂಬಂತೆ ಈಗ ಒಬ್ಬ ಕಾರ್ಮಿಕ ಎರಡು ಮೂರು ಮನೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ಮಾಡಿಕೊಂಡಿರುವ ಮನೆಗಳನ್ನು ಬಿಟ್ಟುಕೊಟ್ಟರೆ ಮಾತ್ರ ಮನೆಗಳ ಹಕ್ಕು ಪತ್ರವನ್ನು ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಒಪ್ಪಂದಂತೆ ನೀವು ಸಹ ಮನೆಗಳನ್ನು ಬಿಟ್ಟುಕೊಡಬೇಕೆಂದು ಕಾರ್ಮಿಕರಿಗೆ ತಿಳಿಸಿದರು. ಬೆಮೆಲ್ ಅಥವಾ ಚಿನ್ನದ ಗಣಿಗಳ ಕಾರ್ಮಿಕರ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸಂಸದ ಮಲ್ಲೇಶ್ ಬಾಬು ಕಾರ್ಮಿಕರಲ್ಲಿಮನವಿ ಮಾಡಿದರು.
ಕಾರ್ಮಿಕರ ಸಮಸ್ಯೆಗಳು ಏನು ಎಂಬುದು ಗೊತ್ತಿಲ್ಲ, ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯನ್ನು (ಎಚ್ಎಎಲ್) ಅನ್ನು ದುರ್ಬಲಗೊಳಿಸಿದೆ ಎಂದು 2019ರಲ್ಲಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರು ಕ್ಷಮೆ ಕೋರಬೇಕು ಎಂದು ಬಿ.ಜೆ.ಪಿ ಸಂಸದ ಕೆ. ಸುಧಾಕರ್ ಆಗ್ರಹಿಸಿದ್ದಾರೆ. 2023ರಲ್ಲಿ ತುಮಕೂರು ಬಳಿ ಎಚ್.ಎ.ಎಲ್ ಗೆ ಸೇರಿದ ದೇಶದ ಅತಿ ದೊಡ್ಡ ಯುದ್ಧ ಹೆಲಿಕಾಪ್ಟರ್ ಗಳ ತಯಾರಿಕಾ ಕಾರ್ಖಾನೆಗೆ ಪ್ರಧಾನಿ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ವಿರುದ್ಧ ಟ್ವಿಟರ್ ನಲ್ಲಿ ಅವರು ವಾಗ್ದಾಳಿ ನಡೆಸಿ, ರಾಹುಲ್ ಗಾಂಧಿಯವರು ಪ್ರಧಾನಿಯವರಗೆ ಕ್ಷಮೆ ಕೋರಬೇಕು ಎಂದಿದ್ದಾರೆ.