
ಬಾಗಲಕೋಟೆ:ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ(ಪ್ರೌಢವಿಭಾಗದಲ್ಲಿ) ಗುರವಾರ ಹಮ್ಮಿಕೊಂಡಿದ್ದ ಗುಳೇದಗುಡ್ಡ ವಲಯದ ಅಂಗವಿಕಲ ಮಕ್ಕಳ ಪಾಲಕರ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಎಮ್ ಬಿ ದೊಡ್ಡಪ್ಪನವರ ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದರಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

j3tvkannada.in
ಸರಕಾರ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸಾರಿಗೆ, ಬೆಂಗಾವಲು, ಹೆಣ್ಣು ಮಕ್ಕಳ ಪ್ರೋತ್ಸಾಹಧನ ಭತ್ಯೆ, ಅಂಧರಿಗೆ ಓದುಗರ ಭತ್ಯೆ ಹಾಗೂ ಫಿಸಿಯೋಥೆರಪಿ ಸೇವೆ, ಅರ್ಹ ಅಂಗವಿಕಲ ಮಕ್ಕಳಿಗೆ ಸಾಧನಾ ಸಲಕರಣೆ ವಿತರಿಸಲಾಯಿತು. ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಿ ದಿನನಿತ್ಯ ಶಾಲೆಗೆ ಕಳುಹಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯೆ ಎಂ ಸಿ ಮುದಕವಿ ಮಾತಾಡಿ, ಅಂಗವಿಕಲ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಷಯ ವಿನಾಯಿತಿ ಇದೆ ಆ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ನಂತರ ಸಮನ್ವಯ ಶಿಕ್ಷಣ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು. ಎನ್ ಡಿ ಬೀಳಗಿ, ಎಸ್ ಎಸ್ ಚೌಕದ, ಎಚ್ ಆರ್ ಕಡಿವಾಲ, ವಿ ಎಚ್ ಮಡಿವಾಳರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಾಮಚಂದ್ರ ಬಾಪಟ, ರಾಜಶೇಖರ ಹುನಗುಂದ, ಜಗದೀಶ ಬುಳ್ಳಾ, ಭಾಗೀರಥಿ ಆಲೂರ ಇನ್ನೂ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.