
ವಿಜಯ್ ದೇವರಕೊಂಡ: ವಿಜಯ್ ದೇವರಕೊಂಡ ಅವರು ತೆಲುಗು ಟಿವಿ ನಿರ್ದೇಶಕ ದೇವರಕೊಂಡ ಗೋವರ್ಧನ್ ರಾವ್ ಅವರ ಮಗನಾಗಿದ್ದು, ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಅವರು ಶಿಕ್ಷಣ ಪೂರ್ಣಗೊಳಿಸಿದ ನಂತರ ರಂಗಭೂಮಿಯ ಮೂಲಕ ನಟನೆಯನ್ನು ಕಲಿತರು. ಅರ್ಜುನ್ ರೆಡ್ಡಿ ಮತ್ತು ಗೀತ ಗೋವಿಂದಂ ಚಿತ್ರಗಳು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಅವರು ಯಶಸ್ವಿ ನಟರಾಗಿ ಮಾತ್ರವಲ್ಲದೆ, ಉತ್ತಮ ದಾನಿ ಮತ್ತು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

j3tvkannada
ನಟ ವಿಜಯ್ ದೇವರಕೊಂಡ ಅವರಿಗೆ ಶಿಕ್ಷಣವನ್ನು ಮೊದಲು ಪಡೆದು ನಂತರ ನಟನೆಗೆ ಬರಬೇಕು ಎಂಬ ಧ್ಯೇಯ ಇತ್ತು. ಅವರು ಹಾಗೆಯೇ ಮಾಡಿದರು ಕೂಡ. ಅವರು ಚಿತ್ರರಂಗಕ್ಕೆ ಬರೋದಕ್ಕೂ ಮೊದಲು ಸುತ್ರಧಾರ ಹೆಸರಿನ ರಂಗ ತಂಡ ಸೇರಿಕೊಂಡರು. ಇದರಿಂದ ಅವರು ನಟನೆ ಕಲಿತರು. ಇಂದು (ಮೇ 9) ವಿಜಯ್ಗೆ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಾ ಇದ್ದಾರೆ.
ವಿಜಯ್ ದೇವರಕೊಂಡ ಅವರ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಯಿತು. ಇದು ಅವರ ವೃತ್ತಿ ಜೀವನವನ್ನೇ ಬದಲಿಸಿ ಬಿಟ್ಟಿತು. ಅವರ ನಟನೆಯ ಈ ಚಿತ್ರ ಅನೇಕರಿಂದ ಮೆಚ್ಚುಗೆ ಪಡೆಯಿತು. ಸಂದೀಪ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ವಿಜಯ್ ಅವರು ಅರ್ಜುನ್ ರೆಡ್ಡಿ ಸಿನಿಮಾ ನಟನೆಗೆ ಫಿಲ್ಮ್ಫೇರ್ ಅವಾರ್ಡ್ ಪಡೆದರು. ಆ ಬಳಿಕ ಇದನ್ನು ಮಾರಿ ಅದರಿಂದ ಬಂದ 25 ಲಕ್ಷ ರೂಪಾಯಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟರು.
ವಿಜಯ್ ದೇವರಕೊಂಡ ನಟನೆಯ ಗೀತ ಗೋವಿಂದಂ ಸಿನಿಮಾ ಗೆಲುವು ಕಂಡಿತು. ಈ ಚಿತ್ರದ ಮೂಲಕ ಅವರ ಬಾಳಲ್ಲಿ ರಶ್ಮಿಕಾ ಮಂದಣ್ಣ ಬಂದರು. ಈ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದರು. ಈ ಚಿತ್ರದ ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿತು ಎಂದು ಹೇಳಲಾಗಿದೆ. ಇವರು ಈಗ ಒಟ್ಟಾಗಿ ಇದ್ದಾರೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ.
ವಿಜಯ್ ದೇವರಕೊಂಡ ಅವರು ಏಷ್ಯನ್ ಸಿನಿಮಾಸ್ನ ಕೋ ಓನರ್ ಆಗಿದ್ದಾರೆ. ಅವರು ಏಷ್ಯನ್ ವಿಜಯ್ ದೇವರಕೊಂಡ ಸಿನಿಮಾಸ್ ಹೊಂದಿದ್ದಾರೆ. ಇದು ತೆಲಂಗಾಣದಲ್ಲಿ ಇದೆ. ದಿ ದೇವರಕೊಂಡ ಫೌಂಡೇಷನ್ ಹೆಸರಿನ ಎನ್.ಜಿ.ಓ, ವನ್ನು ಇವರು 2019ರಲ್ಲಿ ಆರಂಭಿಸಿದರು.