
ಉತ್ತರಕನ್ನಡ: ಸಿದ್ದಾಪುರತಾಲ್ಲೂಕಿನ ಹೆಗ್ಗೋದ್ಮನೆಯ ಚೌಡೇಶ್ವರಿ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಹೆಗ್ಗರಣೆಯ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕೌಲಾಳಿ ಚಂದ್ರಶೇಖರ ಶೆಟ್ಟಿ ವಿರಚಿತ ಶ್ರೀದೇವಿ ಚೌಡೇಶ್ವರಿ ಯಕ್ಷಗಾನ ಅಖ್ಯಾನ ಇತ್ತೀಚೆಗೆ ಪ್ರದರ್ಶನ ಕಂಡಿತು.

j3tvkannada
ಕಥಾನಾಯಕ ಸುಲೋಚನನಾಗಿ ನಾಟ್ಯಾಚಾರ್ಯ ಶಂಕರ ಭಟ್, ಕಥಾನಾಯಕಿ ಸಂಧ್ಯಾವತಿಯಾಗಿ ಶ್ರೀಕಾಂತ ಹೆನ್ನೆ ರಂಜಿಸಿದರು. ಧರ್ಮದೇವನಾಗಿ ಈಶ್ವರ ಭಟ್ ತೆಪ್ಪಗಿ, ಮಂತ್ರಿಯಾಗಿ ತೃಪ್ತಿ ಬೇಡ್ಕಣಿ, ಮೊದಲನೇ ವಿಡೂರಥನಾಗಿ ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ, ವಿಷಕಂಠ ಹಾಗೂ ಚಿತ್ರಗುಪ್ತನಾಗಿ ವೆಂಕಟರಮಣ ಹೆಗಡೆ ಮಾದನಕಳ್, ಮಾಲತಿ ಹಾಗೂ ಚಿತ್ರಾಂಗಿಯಾಗಿ ಶಿವು ಶಿರಳಗಿ, ಯಮನಾಗಿ ರಘುಪತಿ ನಾಯ್ಕ ಹೆಗ್ಗರಣಿ, ಚೌಡೇಶ್ವರಿಯಾಗಿ ರಾಜು ನಿಡಗೋಡ್, ಭದ್ರವರ್ಮನಾಗಿ ಮಾರ್ಷಲ್ ಮುರೂರ, ಪುರೋಹಿತ ಹಾಗೂ ಪ್ರೇತನಾಗಿ ಗಣೇಶ, ಈಶ್ವರನಾಗಿ ಸುರೇಶ ಮಡಿವಾಳ ಪಾತ್ರ ನಿರ್ವಹಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಶಶಾಂಕ ಯಲ್ಲಾಪುರ, ಗಜಾನನ ಭಟ್ ತುಳಗೇರಿ, ಎಂ.ಪಿ.ಹೆಗಡೆ ಉಲ್ಲಾಳಗದ್ದೆ, ಮದ್ದಲೆವಾದಕರಾಗಿ ವಿಠಲ ಪೂಜಾರಿ, ಚೆಂಡೆವಾದಕರಾಗಿ ಮಹಾಬಲ ನಾಯ್ಕ ಸಹಕರಿಸಿದರು.