
ಶಿವಮೊಗ್ಗ: ಗುರುವಾರ ಇಡೀ ದಿನ ಬಿಸಿಲು ನಡುವೆ ಆಗಾಗ್ಗೆ ಮಳೆ ಬಂದು ಹೋಯಿತು. ಜಿಲ್ಲೆಯಲ್ಲಿ ಸರಾಸರಿ 13.8 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಸರಾಸರಿಯಂತೆ ಹೊಸನಗರದಲ್ಲಿ 22ಮಿ.ಮೀ. ಸಾಗರ 20, ಸೊರಬ 16, ತೀರ್ಥಹಳ್ಳಿ 11, ಶಿಕಾರಿಪುರದಲ್ಲಿ9 ಮಿ.ಮೀ. ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 48, ಹುಲಿಕಲ್ನಲ್ಲಿ 37 ಮಿ.ಮೀ. ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 26 ಸಾವಿರ ಕ್ಯೂಸೆಕ್ ಗೆ ಇಳಿದಿದ್ದು ನೀರಿನ ಮಟ್ಟ 1 ಅಡಿ ಏರಿಕೆಯಾಗಿದೆ.

ಭದ್ರಾ ಜಲಾಶಯದ ಒಳ ಹರಿವು 19 ಸಾವಿರ ಕ್ಯೂಸೆಕ್ ಏರಿಕೆಯಾಗಿದ್ದು, ನೀರಿನ ಮಟ್ಟ ಎರಡು ಅಡಿ ಏರಿಕೆಯಾಗಿದೆ. ತುಂಗಾ ಜಲಾಶಯಕ್ಕೆ 27 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ, ಒಳನಾಡು ಜಿಲ್ಲೆಗಳಲ್ಲಿ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.
ಜೂ.20 ಮತ್ತು 21 ರಂದು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಮೊದಲ ದಿನ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿಅತಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಪ್ರಮುಖವಾಗಿ ಉಪ್ಪಿನಂಗಡಿ 6, ಗೇರುಸೊಪ್ಪ 5, ಮಂಕಿ, ಯಲ್ಲಾಪುರ, ಲೋಂಡಾ, ಆಗುಂಬೆ, ಕೊಟ್ಟಿಗೆ ಹಾರದಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.