
ಮಂಡ್ಯ: ಉಗ್ರರ ವಿರುದ್ಧ ನಡೆದ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದೆ. ದೇಶ-ವಿದೇಶಗಳಲ್ಲಿ ಸಿಂಧೂರ ಹೆಸರು ಟ್ರೆಂಡ್ ಆಗ್ತಿದೆ. ಹೀಗಾಗಿ ಇದರ ಸ್ಮರಣಾರ್ಥವಾಗಿ ಇಲ್ಲೊಂದು ಕುಟುಂಬ ಹುಟ್ಟಿದ ಮಗುವಿಗೆ ಸಿಂಧೂರಿ ಎಂದು ನಾಮಕರಣ ಶಾಸ್ತ್ರಮಾಡುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ.

j3tvkannada
ಪಹಲ್ಗಾಮ್ ದುರ್ಘಟನೆ ಬಳಿಕ ಉಗ್ರರ ವಿರುದ್ದ ನಮ್ಮ ಕೇಂದ್ರ ಸರ್ಕಾರ ಸಿಂಧೂರ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಉಗ್ರರನ್ನ ಸದೆ ಬಡಿದಿದ್ದಾರೆ. ಹೀಗಾಗಿ ದೇಶದ ಜನ್ರಲ್ಲಿ ಸಿಂಧೂರ ಹೆಸರು ಟ್ರೆಂಡ್ ಆಗ್ತಿದ್ದು, ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಬಿ.ಆರ್ ಕೊಪ್ಪಲು ಗ್ರಾಮದಲ್ಲಿ ಹುಟ್ಟಿದ ಮಗುವಿಗೆ ಸಿಂಧೂರಿ ಎಂದು ನಾಮಕರಣ ಮಾಡಿದ್ದಾರೆ.
ಬಿ.ಆರ್ ಕೊಪ್ಪಲು ಗ್ರಾಮದ ಸೋಮಶೇಖರ್ ಹಾಗೂ ಹರ್ಷಿತಾ ದಂಪತಿಗಳಿಗೆ ಹೆಣ್ಣು ಮಗುವಿನ ಜನನವಾಗಿದೆ. ಈ ಮಗುವಿಗೆ ಹೆಸರು ಇಡಲು ಕುಟುಂಬ ನಿಶ್ಚಯಿಸಿತ್ತು. ಇದೇ ವೇಳೆ ಉಗ್ರರ ವಿರುದ್ದ ನಡೆದ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಹೀಗಾಗಿ ಸೈನಿಕರ ರೋಚಕ ಕಾರ್ಯಾಚರಣೆಯ ನೆನಪಿನಾರ್ಥವಾಗಿ ಮಗುವಿಗೆ ಸಿಂಧೂರಿ ಎಂದು ಹೆಸರು ನಾಮಕರಣ ಮಾಡಲು ಕುಟುಂಬ ತೀರ್ಮಾನಿಸಿತ್ತು. ಇನ್ನು ಮಗುವಿಗೆ ಸಿಂಧೂರಿ ಎಂದು ನಾಮಕರಣ ಮಾಡಲು ಕುಟುಂಬ ನಿರ್ಧಾರ ಮಾಡಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಶಂಕರ್ ಬಾಬು ಬಿ.ಆರ್ ಕೊಪ್ಪಲು ಗ್ರಾಮಕ್ಕೆ ತೆರಳಿ ದಂಪತಿಗಳ ದೇಶ ಪ್ರೇಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.